ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಭಾರತ್ ಹಾಗೂ ಪಾಕಿಸ್ತಾನ ನಡುವೆ ಯುದ್ದದ ಕಾರ್ಮೊಡ ಉಂಟಾಗಿದ್ದು,ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ ಸಜ್ಜಾಗಿದ್ದು, ಮೇ 12ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಾಲ್ಕು ಕಡೆಯಲ್ಲಿ ಮಾಕ್ ಡ್ರೀಲ್ (Mock drill) ಮಾಡುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ಎಂ.ನಾರಾಯಣ್ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತಮಾಡಿದ ಅಧಿಕಾರಿಗಳು ಕೈಗಾ,ನೌಕಾನೆಲೆ ಇರುವುದರಿಂದ ಕಾರವಾರವನ್ನು ಕ್ಯಾಟಗರಿ 2ನಲ್ಲಿ ಸೇರಿಸಲಾಗಿದೆ. ಮೇ 12 ಸೋಮವಾರ 6 ಬೇರೆ ಬೇರೆ ಸ್ಥಲ್ಲಿ ಮಾಕ್ ಡ್ರಿಲ್ ಮಾಡಲು ನಿರ್ಧಾರ ಮಾಡಲಾಗಿದೆ. 4ಗಂಟೆಗೆ ಗ್ರಾಸಿಮ್ನಲ್ಲಿ ಕಟ್ಟಡ ಕುಸಿತ, ಜನರ ರಕ್ಷಣೆ, ಆಸ್ಪತ್ರೆಗೆ ಸಾಗಾಟ ಮಾಕ್ ಡ್ರಿಲ್ ನಡೆಸಲಾಗುವುದು,ಇದಕ್ಕೆ 40 ಸಿಬ್ಬಂದಿಯನ್ನು ನಿಯೋಜಿಸಲಾಗುವುದು, ಸಂಜೆ 4 ಗಂಟೆಗೆ ಕೈಗಾದಲ್ಲಿ ಫೈಯರ್ ಡಿಪಾರ್ಟ್ ಮೆಂಟ್ ಸಹಾಯದಿಂದ ಮಾಕ್ ಡ್ರಿಲ್ ನಡೆಯಲಿದೆ, ಸಂಜೆ 5 ಗಂಟೆಗೆ ಆಮದಳ್ಳಿ ಸಿವಿಲಿಯನ್ ಕಾಲೋನಿಯಲ್ಲಿ ಬೆಂಕಿಯಿಂದ 40 ಜನರನ್ನು ರಕ್ಷಣೆ ಮಾಡುವಂತೆ ಸಿಬ್ಬಂದಿ ನೇಮಕ, ಬೈತಕೋಲ್ದಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ, ಸಂಜೆ 5 ಗಂಟೆಗೆ ಕೆಪಿಸಿಎಲ್ ನೇತೃತ್ವದಲ್ಲಿ ಹರಟುಗಾ ಗ್ರಾಮದ ಜನರ ರಕ್ಷಣೆ, ಸಿದ್ಧರ ಶಾಲೆಗೆ ಸೇರಿಸುವಂತೆ ಮಾಕ್ ಡ್ರಿಲ್, 6 ಗಂಟೆಗೆ ರವೀಂದ್ರ ನಾಥ ಟಾಗೋರ್ನಲ್ಲಿ ಬೀಚ್ನಲ್ಲಿರುವ ಜನರನ್ನು ರಕ್ಷಣೆ ಮಾಡುವಂತೆ ಕಾರ್ಯಚರಣೆ ನಡೆಸಲಾಗುವುದು,ಇದಕ್ಕೆ ಕೋಸ್ಟಲ್ ಪೊಲೀಸ್, ಪ್ರವಾಸೋದ್ಯಮ ಸಹಾಯ ಪಡೆಯಲಾಗುವುದು, 7.30- 8 ಗಂಟೆಗೆ ಕಾರವಾರ ನಗರ ವ್ಯಾಪ್ತಿ ಹಾಗೂ ಕೈಗಾ ಟೌನ್ಶಿಪ್ನಲ್ಲಿ ಬ್ಲ್ಯಾಕ್ ಔಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ.
7.30ಗೆ ಬ್ಲ್ಯಾಕ್ ಔಟ್ ಮಾಡಲು ಸೈರನ್ ಮಾಡಲಾಗುತ್ತಿದ್ದು, ಈ ವೇಳೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಜನರು ಮನೆಯಲ್ಲಿದ್ದು ಬೆಳಕು ಆರಿಸಬೇಕು, ನಗರದಲ್ಲಿ ಎನ್ಸಿಸಿ, ಎನ್ಎಸ್ಎಸ್, ಹೋಂ ಗಾರ್ಡ್ಸ್, ಸಿವಿಲಿಯನ್ಸ್ ಸೇರಿಸಿ ಮಾಕ್ ಡ್ರಿಲ್ ನಡೆಸಲಾಗುವುದು, ದಾಳಿಯಿಂದ ರೇಡಿಯೇಶನ್ ಉಂಟಾದಲ್ಲಿ 20 ಕಿಮೀ. ಹಬ್ಬುವ ಸಾಧ್ಯತೆಯಿದೆ. ರೇಡಿಯೇಶನ್ ಸಂಬಂಧಿಸಿ ಈ ಹಿಂದೆಯೇ ಮಾಕ್ ಡ್ರಿಲ್ ಮಾಡಲಾಗಿದೆ. ಶೆಲ್, ಮಿಸೈಲ್ ಅಟ್ಯಾಕ್ ಆದಲ್ಲಿ ಎದುರಿಸಲು ತಯಾರಿ ಕೂಡಾ ಮಾಕ್ ಡ್ರಿಲ್ನಲ್ಲಿ ನಡೆಸಲಾಗುತ್ತದೆ. ಇನ್ನೂ ಬೀಚ್ನಲ್ಲಿ ಶೆಲ್ ದಾಳಿಯಾದ್ರೆ ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎನ್ನುವುದನ್ನ ತಯಾರಿ ಮಾಡಲಾಗುವುದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫೋಟೊ, ಫೋಸ್ಟ್ಗಳ ಹಾಕದಂತೆ ನೋಡಿಕೊಳ್ಳಲುಇಲಾಖೆ ಕಣ್ಣಿರಿಸಿದೆ
ಡ್ಯಾಂಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದ್ದು, ಕೈಗಾದಲ್ಲಿ ಸಿಐಎಸ್ಎಫ್ನಿಂದ ಹೆಚ್ಚಿನ ಭದ್ರತೆ ನಡೆಸಲಾಗಿದೆ. ಸಮುದ್ರ ಭಾಗದಲ್ಲಿ ಬರುವಂತಹ ಬೋಟ್ಗಳು ಹಾಗೂ ಮೀನುಗಾರಿಕಾ ಕಾರ್ಮಿಕರ ಮೇಲೂ ಕಣ್ಣಿರಿಸಲಾಗಿದೆ. ಕೋಸ್ಟ್ ಗಾರ್ಡ್ಸ್ ಹಾಗೂ ಕೋಸ್ಟಲ್ ಪೊಲೀಸ್ ಸಮುದ್ರದಲ್ಲಿ ತಿರುಗಾಡಿ ಹದ್ದಿನಗಣ್ಣಿರಿಸಿದ್ದಾರೆಂದು ಎಸ್ಪಿ ಎಂ ನಾರಾಯಣ ಅವರು ತಿಳಿಸಿದ್ದಾರೆ.
ಇದನ್ನೂ ಓದಿ