ಸುದ್ದಿಬಿಂದು ಬ್ಯೂರೊ ವರದಿ (suddibindu Digital News)
ಮಂಗಳೂರು : Ksrtc Conductor ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಓರ್ವಳು ನಿದ್ದೆಗೆ ಜಾರಿದ ವೇಳೆಯಲ್ಲಿ ಅದೆ ಬಸ್‌ನ ಬಾಗಲಕೋಟೆ ಮೂಲದ  ನಿರ್ವಾಹಕ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಂಗಳೂರಲ್ಲಿ ನಡೆದಿದ್ದು,ಪೊಲೀಸರು ಆತನನ್ನ ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನಿವಾಸಿ ಪ್ರದೀಪ್ ಎಂಬಾತ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಹೋಗಿ ಬಂಧನಕ್ಕೆ ಒಳಗಾದ ನಿರ್ವಾಹಕನಾಗಿದ್ದಾನೆ. ರಾತ್ರಿ ವೇಳೆಯಲ್ಲಿ ಬಸ್ ಚಲಿಸುವ ವೇಳೆ ಆ ಯುವತಿಗೆ ನಿದ್ದೆ ಬಂದಿದೆ ಎನ್ನಲಾಗಿದೆ. ಈ ವೇಳೆಯಲ್ಲಿ ಕಾಮುಕ ನಿರ್ವಾಹಕ‌ ನಿಧಾನಕ್ಕೆ ಯುವತಿಯ ಖಾಸಗಿ ಅಂಗಗಳನ್ನ ಮುಟ್ಟಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಅಲ್ಲ ಪಕ್ಕದಲ್ಲಿದ್ದ ಪ್ರಯಾಣಿಕನೋರ್ವ ನಿರ್ವಾಹಕ ಯುವತಿಯೊಂದಿಗೆ ಅನುಚಿತವಾಗಿ ವರ್ಥಿಸುವುದನ್ನ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿಕೊಂಡಿದ್ದ ಎನ್ನಲಾಗಿದೆ.

ಆ ಒಂದು ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು, ಬಳಿಕ ಎಚ್ಚೇತ್ತುಕೊಂಡ ಪೊಲೀಸರು ಆತನನ್ನ ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಇನ್ನೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ರೀತಿ ಕೃತ್ಯ ನಡೆದಿರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯಿಂದ ರಾತ್ರಿ ವೇಳೆಯಲ್ಲಿ ಯುವತಿಯರು,ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುವಾಗ ಎಚ್ಚರ ವಹಿಸಬೇಕಿದೆ. ಈ ಕೃತ್ಯ ಎಸೆಗಿರುವ ನಿರ್ವಾಹಕನ ವಿರುದ್ದ ಇಲಾಖೆ ಶಿಸ್ತುಕ್ರಮ ಕೈಗೊಳ್ಳಬೇಕಿದೆ..

ಇದನ್ನೂ ಓದಿ