ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಅಂಗನವಾಡಿಗೆ ಹೋಗುವ ಮಕ್ಕಳ ಆರೋಗ್ಯ ತಪಾಸಣೆಗಾಗಿ ಇಲಾಖೆಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.ಅಂಗನವಾಡಿಯಲ್ಲಿ ಕುಳಿತು ಆ ಪುಟ್ಟ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕಿದ್ದ ಮಹಿಳಾ ವೈದ್ಯರೊಬ್ಬರು ಎಸಿ ಕಾರನಲ್ಲಿ ಕುಳಿತು ಮಗುವನ್ನ ಬಿಸಿನಲ್ಲಿ ನಿಲ್ಲಿಸಿ ತಪಾಸಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮುಗ್ವೇಖಾನ್ವಾಡಿ ಅಂಗನವಾಡಿಯಲ್ಲಿ ನಡೆದಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.
ಇಂದು ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗ್ವೇಖಾನ್ವಾಡಿ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನ ಇಟ್ಟುಕೊಳ್ಳಲಾಗಿತ್ತು ಎನ್ನಲಾಗಿದೆ. ವೈದ್ಯರು ಬರುವಾಗಲೆ ವಿಳಂಬವಾಗಿ ಬಂದಿದ್ದಾರೆನ್ನಲಾಗಿದ್ದು ಕೆಲ ಸಮಯ ಇದ್ದು, ಹಾಗೆ ಸಮಯಕ್ಕೂ ಮೊದಲೆ ವಾಪಸ್ ಅಗಲು ಎಸಿ ಕಾರ ಹತ್ತಿದ್ದರು ಎನ್ನಲಾಗಿದೆ. ಸಮಯ ಮುಗಿಯದ ಕಾರಣ ಮಹಿಳೆ ಓರ್ವರು ನಿಗದಿತ ಸಮಯದೊಳಗೆ ತಪಾಸಣೆಗಾಗಿ ಮಗುವನ್ನ ಕರೆದುಕೊಂಡು ಬಂದಿದ್ದರೆನ್ನಲಾಗಿದೆ.
ತಪಾಸಣೆಗಾಗಿ ಮಗು ಬಂದಿರುವುದನ್ನ ಗಮನಿಸಿದ ಆ ಮಹಿಳಾ ವೈದ್ಯೆ ಅಂಗನವಾಡಿ ಒಳಗೆ ಬಂದು ತಪಾಸಣೆ ಮಾಡುವುದನ್ನ ಬಿಟ್ಟು ಬಿರು ಬಿಸಿನಲ್ಲಿ ತಾನು ಕಾರಿನಲ್ಲೆ ಕುಳಿತು ಕಾಟಾಚಾರಕ್ಕೆ ತಪಾಸಣೆ ಮಾಡಿ ಹೋಗಿದ್ದಾರೆನ್ನಲಾಗಿದೆ. ಸದ್ಯ ಮಹಿಳಾ ವೈದ್ಯೆ ಮಗುವನ್ನ ಹೊರಗಡೆಯೆ ತಪಾಸಣೆ ಮಾಡಿವುದನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು ತಕ್ಷಣವೇ ಇವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನೂ ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯನ್ನು ಪ್ರಶ್ನಿಸಿದರೆ ಅವರು ಯಾವತ್ತೂ ಹಾಗೇ ಅವರು ಬಂದಾಗ ಅವರಿಗೆ ಸ್ವಲ್ಪವೂ ಕಿರಿಕಿರಿಯಾಗಬಾರದು. ಅಲ್ಲದೆ ನಾವೂ ಏನು ಮಾಡುವುದು ಎಂದು ಅವರ ಗೋಳನ್ನು ತೋಡಿಕೊಳ್ಳುತ್ತಾರೆ…ಆದ್ದರಿಂದ ಈ ಬಗ್ಗೆ ಸಂಬಂಧಿಸಿದ ಇಲಾಖೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ..
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


