ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಬೆಂಗಳೂರಿನಿಂದ ಕಾರಿನಲ್ಲಿ ಕುಟುಂಬ ಸಮೇತರಾಗಿ ನಿಶ್ಚಿತಾರ್ಥಕ್ಕಾಗಿ ಮುರುಡೇಶ್ವರಕ್ಕೆ ಬರುತ್ತಿದ್ದ ವೇಳೆ ಕೆಎಸ್‌ಆರ್‌‌ಟಿಸಿ ಬಸ್ ನಡವೆ ಅಪಘಾತ ಉಂಟಾಗಿ ಕಾರನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಉಪ್ಪೋಣಿ ಬಳಿ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಭಟ್ಕಳದಿಂದ‌ ಹೊನ್ನಾವರ ಮಾರ್ಗವಾಗಿ ಶಿರಸಿಗೆ ಹೋಗುತ್ತಿದ್ದು, ಇನ್ನೂ ಕಾರು ಬೆಂಗಳೂರಿನಿಂದ‌ ಮುರುಡೇಶ್ವರಕ್ಕೆ ಬರುತ್ತಿತ್ತು. ಈ ವೇಳೆ ಉಪ್ಪೊಣಿ ಬಳಿ ಅಪಘಾತ ಉಂಟಾಗಿ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರವಾಗಿ ಗಾಯವಾಗಿದ್ದು, ಓರ್ವ ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದುಬಂದಿದೆ.

ನಾಳೆ‌ ಮುರುಡೇಶ್ವರದಲ್ಲಿ ನಿಶ್ಚಿತಾರ್ಥ ಇರುವ ಕಾರಣ ಕುಟಂಬ ಸಮೇತರಾಗಿ ಬೆಂಗಳೂರಿನಿಂದ ಕಾರನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊನ್ನಾರವ ಉಪ್ಪೋಣಿ ಬಳಿ ಬರುತ್ತಿದ್ದಂತೆ ಅಪಘಾತ ಉಂಟಾಗಿದೆ.ಅಪಘಾತದ ಭೀಕರತೆಗೆ ಕಾರನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಎಲ್ಲರನ್ನ 108ವಾಹನದ ಮೂಲಕ ಸದ್ಯ ಹೊನ್ನಾವರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಇದನ್ನೂ ಓದಿ