ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು :ಹಿಂದುಳಿದ ವರ್ಗದ ಯುವ ಮುಖಂಡ ಲೋಹಿತ್ ನಾಯಕ ಅವರು ಜಾತಿ ಸಮೀಕ್ಷೆ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ರಾಜಕೀಯ ಸಂಚು ಎಂದು ತೀವ್ರವಾಗಿ ವಿರೋಧಿಸಿದ್ದಾರೆ.
“ಜಾತಿ ಸಮೀಕ್ಷೆ ಕುರಿತು ಅಪಪ್ರಚಾರ ಹಬ್ಬಿಸುವುದು ಎಂದರೆ, ಹಿಂದುಳಿದ ವರ್ಗಗಳನ್ನು ಶಾಶ್ವತವಾಗಿ ವಂಚನೆಗೊಳಿಸುವ ರಾಜಕೀಯ ಸಂಚು. ಇದರ ಹಿಂದೆ ಸಾಮಾಜಿಕ ನ್ಯಾಯದ ವಿರೋಧಿಗಳಿದ್ದಾರೆ,ಎಂದು ಲೋಹಿತ್ ನಾಯಕ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.
ಅವರು ರಾಜ್ಯದಾದ್ಯಂತ ಜಾತಿ ಸಮೀಕ್ಷೆಯ ಪರ ಧ್ವನಿ ಎತ್ತುತ್ತಿರುವ ಪ್ರಮುಖ ಹಿಂದುಳಿದ ವರ್ಗದ ನಾಯಕರಲ್ಲಿ ಒಬ್ಬರು.ತಮ್ಮ ಹೋರಾಟದ ಮೂಲಕ ಹಿಂದುಳಿದ ಸಮುದಾಯಗಳ ಹಕ್ಕುಗಳಿಗಾಗಿ, ಅನ್ಯಾಯಗಳ ವಿರುದ್ಧ ನಿರಂತರವಾಗಿ ಮಾತನಾಡುತ್ತಾ ಬಂದಿದ್ದಾರೆ.
ಅಂಕಿಅಂಶಗಳಿಲ್ಲದೆ ನೀತಿಯನ್ನ ರೂಪಿಸಲು ಸಾಧ್ಯವಿಲ್ಲ. ಸಮೀಕ್ಷೆ ಆಧಾರಿತ ರಾಜ್ಯಕ್ಷೇಮ ನೀತಿಗಳು ಹಿಂದುಳಿದ ವರ್ಗಗಳಿಗೆ ನಿಜವಾದ ನ್ಯಾಯ ಒದಗಿಸಬಹುದು. ಇದನ್ನು ತಪ್ಪಿಸಲು ಇಚ್ಛಿಸುವವರು, ಪ್ರಜಾಪ್ರಭುತ್ವದ ಶತ್ರುಗಳು.ಎನ್ನುವುದು ಅವರ ಪ್ರಬಲವಾದ ವಾದ. ವರದಿ ಟೇಬಲ್ ಆದ ನಂತರ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ವರದಿಯ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಕೇಳಿಬರುತ್ತಿದ್ದು, ಇದರ ಹಿಂದೆ ಒಂದು ಸಾಮಾಜಿಕ ನ್ಯಾಯದ ವಿರೋಧಿಗಳ ದೊಡ್ಡ ಮಷೀನರಿ ಕೆಲಸಮಾಡುತ್ತಿದೆ ಎಂದು ಹೇಳಿದರು.
ಅವರು ಸರ್ಕಾರವನ್ನು ಸಮೀಕ್ಷೆಯ ವರದಿಯನ್ನು ತಕ್ಷಣ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ ಮತ್ತು ಸಮಾಜದ ಸಮಾನತೆಯ ಪರವಾಗಿರುವ ಎಲ್ಲರಿಗೂ ಹೋರಾಟಕ್ಕೆ ಕರೆ ನೀಡಿದ್ದಾರೆ. ವರದಿಯ ಕುರಿತು ಅಪಪ್ರಚಾರ ಮಾಡುವರ ಕುರಿತು ಸಮುದಾಯಗಳು ಜಾಗೃತರಾಗಿರಲು ವಿನಂತಿ ಮಾಡಿಕೊಂಡಿಕೊಂಡರು.
ಇದನ್ನೂ ಓದಿ