ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :ಕರಾವಳಿ ಭಾಗದಲ್ಲಿ ಅಪರಾಧ ಪ್ರಕರಣ ನಡೆಸಿ ಬೈಕ್ ನಲ್ಲಿ ಶಿರಸಿ ಮಾರ್ಗವಾಗಿ ಹೋಗುತ್ತಿದ್ದ ಇಬ್ಬರೂ ಆರೋಪಿಗಳನ್ನ ಶಿರಸಿ-ಸಿದ್ದಾಪುರ ಕ್ರಾಸ್ನ ಗಣಪತಿ ದೇವಾಲಯದ ಬಳಿ ವಶಕ್ಕೆ ಪಡೆದಿದ್ದರೆನ್ನುವ ಮಾಹಿತಿ ಲಭ್ಯವಾಗಿದೆ.
ಕರಾವಳಿ ತಾಲೂಕಿನಲ್ಲಿ ಯಾವುದೊ ಒಂದು ಅಪರಾಧ ಪ್ರಕರಣ ನಡೆಸಿ ತಪ್ಪಿಸಿಕೊಳ್ಳಲು ಇಬ್ಬರೂ ಆರೋಪಿಗಳು ಬೈಕ್ ಮೂಲಕ ಶಿರಸಿ ಮಾರ್ಗವಾಗಿ ತೆರಳಿತ್ತಿದ್ದರು ಎನ್ನಲಾಗಿದೆ. ಇಬ್ಬರೂ ಬೈಕ್ ಮೂಲಕ ಶಿರಸಿ ಕಡೆ ಹೊರಟಿರುವ ಬಗ್ಗೆ ಕರಾವಳಿ ಭಾಗದಿಂದ ಶಿರಸಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಶಿರಸಿ ಪೊಲೀಸರು ಶಿರಸಿ-ಸಿದ್ದಾಪುರ ಕ್ರಾಸ್ ಬಳಿಯ ಗಣಪತಿ ದೇವಸ್ಥಾನದ ಬಳಿ ಆರೋಪಿಗಳಿಗಾಗಿ ಕಾಯುತ್ತಿದ್ದ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು ಎನ್ನಲಾಗಿದೆ.
ಇದೆ ವೇಳೆ ಬೈಕ್ ನಲ್ಲಿ ಬಂದ ಆರೋಪಿತರು ತಪ್ಪಿಕೊಳ್ಳು ಪ್ರಯತ್ನಿಸಿದರು ಎನ್ನಲಾಗಿದ್ದು, ಆದರೆ ಅದೆ ಸಂದರ್ಭದಲ್ಲಿ ಸರಕಾರಿ ಬಸ್ ಒಂದು ಅದೆ ಸ್ಥಳದಲ್ಲಿ ಬಂದು ನಿಂತ ಕಾರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅರೋಪಿಗಳ ಬೈಕ್ ಅಲ್ಲೆ ಪಕ್ಕದಲ್ಲಿ ಪಲ್ಟಿಯಾಗಿದೆ ಎನ್ನಲಾಗಿದ್ದು, ಈ ವೇಳೆ ಇನ್ಬರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.ಆದರೆ ಇಬ್ಬರೂ ಆರೋಪಿಗಳು ಕರಾವಳಿ ಭಾಗದಲ್ಲಿ ಚಿನ್ನಾಭರಣ ದರೋಡೆ ಮಾಡಿಕೊಂಡು ಬಂದಿದ್ದಾರೆನ್ನುವ ಬಗ್ಗೆ ಬಸ್ನಲ್ಲಿದ್ದ ಪ್ರಯಾಣಿಕರು ಮಾತ್ನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.ಅದೇನೆ ಇದ್ದರು ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ