ಸುದ್ದಿಬಿಂದು ಬ್ಯೂರೋ ವರದಿ

ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳನ್ನ ಟಾರ್ಗೆಟ್ ಮಾಡುತ್ತಿದೆ.‌ಅದು ಉತ್ತರ ಕನ್ನಡಲ್ಲೂ ನಡೆದಿದೆ. ವಿಚಾರಣೆ ನೆಪದಲ್ಲಿ ಇಲ್ಲಿನ ಪೊಲೀಸರು ವಿಚಾರಣೆಗೆ ಕರೆದು ಹಲ್ಲೆ ಮಾಡಿದ್ದಾರೆ.ಇದನ್ನ ನಾವು ಸಹಿಸೋದಿಲ್ಲ. ಪೊಲೀಸರು ಎಚ್ಚರಿಕೆಯಿಂದ ವರ್ಥನೆ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪೊಲೀಸರ ನಡೆಯ ವಿರುದ್ಧ ಆಕ್ರೋಶ ಹೊರ ಹಾಕುವ ಮೂಲಕ ಪ್ರಚೋಧನಕಾರಿಯಾದ ಹೇಳಿಕೆ ನೀಡಿದ್ದಾರೆ‌

ಅವರು ಇಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಬಿಜೆಪಿ ಜನಾಕ್ರೋಶ‌ ಯಾತ್ರೆ‌ ಉದ್ದೇಶಿಸಿ ಮಾತನಾಡಿದರು.ರಾಜ್ಯದಲ್ಲಿ‌ನ ಪೊಲೀಸ್ ಕಚೇರಿಗಳು ಕಾಂಗ್ರೇಸ್ ಕಚೇರಿಗಳಾಗಿ ಮಾರ್ಪಾಡಾಗುತ್ತಿರುವಂತೆ ಕಂಡು ಬರತ್ತಾ ಇದೆ. ಬಿಜಿಪಿ ಸರಕಾರದಲ್ಲಿ ಪೊಲೀಸರಿಗೆ ಪ್ರತಿ ತಿಂಗಳ‌‌ ಮೊದಲ ದಿನವೇ ಸಂಬಂಳ ಆಗತ್ತಾ ಇತ್ತು. ಆದರೆ ಈಗ ಸರಿಯಾದ ದಿನ ಸಂಬಂಳ ಪೊಲೀಸರ ಕೈ ಸೇರುತ್ತಿಲ್ಲ. ಆದರೂ ಈ ಪೊಲೀಸರು ತಮ್ಮ ಕಚೇರಿಯನ್ನ ಕಾಂಗ್ರೇಸ್ ಕಚೇರಿಯಂತೆ ನೋಡುತ್ತಿದ್ದಾರೆ.

ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಹಲ್ಲೆ‌ ಮಾಡುವುದು ,ಸುಳ್ಳು ಪ್ರಕರಣ‌ ದಾಖಲಿಸುವುದು ಮುಂದರೆದರೆ ಕಾರ್ಯಕರ್ತರೊಂದಿಗೆ ಬಡಿಗೆ ಹಿಡಿದು ಪೊಲೀಸ ಠಾಣೆಗೆ‌ ಬರಬೇಕಾಗುತ್ತದೆ ಎಂದು ವಿಜಯೇಂದ್ರ ಪೊಲೀಸ್ ಇಲಾಖೆ ವಿರುದ್ಧ‌ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ