ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ರೌಡಿಶೀಟರ್ ಪರೇಡ್ ವೇಳೆಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಹೆದ್ದಾರಿ ತಡೆದ 12 ಮಂದಿ ಹಿಂದೂ ಕಾರ್ಯಕರ್ತರ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ 8ರಂದು ಶಿರಸಿಯಲ್ಲಿ ರೌಡಿ ಶೀಟರ್ ಅವರನ್ನ ಪರೇಡ್ ನಡೆಸಿದ ವೇಳೆ ಹಿಂದೂ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಸೇರಿ ಹತ್ತು ಮಂದಿಗೆ ಕಾನೂನು ಸುವ್ಯವಸ್ಥೆ ಕುರಿತಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಜಾಗೃತಿ ಮೂಡಿಸಿದ್ದರು. ಆದರೆ ಈ ವಿಚಾರಣೆ ಮುಗಿಸಿ ಶಿರಸಿಯಿಂದ ಭಟ್ಕಳಕ್ಕೆ ಬಂದ್ ಶ್ರೀನಿವಾಸ್ ನಾಯ್ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ವಿಚಾರಣೆಗೆ ಕರೆಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅದು ಅಲ್ಲದೆ ಸುಳ್ಳು ಸುದ್ದಿ ಹರಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ 12 ಮಂದಿ ವಿರುದ್ಧ ಇದೀಗ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನೂ ಅನೇಕರ ಹೆಸರುಗಳು ಹಾಗೂ ಸದ್ಯ ಅವರುಗಳ ಗುರುತು ಸ್ಪಷ್ಟವಾಗದ ಕಾರಣ ಇನ್ನೂಳಿದವರ ವಿರುದ್ಧ ಪ್ರಕರಣ ದಾಖಲಾಗಿಲ್ಲ.ಮುಂದಿನ ದಿನದಲ್ಲಿ ಅವರ ವಿರುದ್ಧ ಸಹ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ
- ಉತ್ತರ ಕನ್ನಡ ಜಿಲ್ಲಾ ಆಸ್ಪತ್ರೆ ಎಲ್ಲಿಗೆ ? ಜನರ ಒಲವು ಕುಮಟಾಕ್ಕೆ.!”
- ಅಕ್ರಮ ವಲಸಿಗರಿಗೆ ಪ್ರಮಾಣಪತ್ರ ರಾಷ್ಟ್ರೀಯ ಭದ್ರತೆಗೆ ಆತಂಕ: ಜಾತಿ ಗಣತಿ ವರದಿಯನ್ನೂ ಬಹಿರಂಗಪಡಿಸಿ ಎಂದ ರೂಪಾಲಿ ನಾಯ್ಕ
- ಎಸ್ಐಆರ್ ಪ್ರಕ್ರಿಯೆ ಹಾದಿತಪ್ಪಿಸಲು ಕಾಂಗ್ರೆಸ್ ಸರ್ಕಾರ ಯತ್ನ: ಶಾಸಕ ದಿನಕರ ಶೆಟ್ಟಿ ಆರೋಪ
- “RSS ಚರ್ಚೆ ಬಿಟ್ಟು ಕಲಬುರುಗಿ ಶಿಕ್ಷಣದತ್ತ ಗಮನ ಹರಿಸಿ: ಖರ್ಗೆಗೆ ಯಶ್ಪಾಲ್ ಸುವರ್ಣ ಸಲಹೆ”

