ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲು ಓರ್ವ‌ ಕಾರ್ಮಿಕ‌ ಮೃತಪಟ್ಟು ಇನ್ನೋರ್ವ‌ ಕಾರ್ಮಿಕ ಗಂಭೀರಗೊಂಡು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿರುವ ಘಟನೆ ಮುಂಡಗೋಡ ತಾಲೂಕಿನ‌ ಓಣಿಕೇರೆ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಬಸವರಾಜ್ ಚಂದ್ರಪ್ಪ ಹರಿಜನ್ (22) ಮೃತ ವ್ಯಕ್ತಿಯಾಗಿದ್ದಾನೆ.ಹರೀಶ್ ರಾಮಣ್ಣ ಹರಿಜನ್‌ ವಿದ್ಯುತ್ ತಗುಲಿ ಗಂಭೀರಗೊಂಡು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾನೆ.

ಓಣಿಕೇರಿ ಗ್ರಾಮದಲ್ಲಿ ಮೂಕಪ್ಪ ಹರಿಜನ್ ಬೇರೆಯವರ
ಜಮೀನನ್ನು ಗೇಣಿಗೆ ಪಡೆದು ಶುಂಠ ವ್ಯವಸಾಯ ಮಾಡಿದ್ದು, ಕೆಲಸಕ್ಕಾಗಿ ಹಾನಗಲ್ ತಾಲೂಕ್ ಬಾಳಂಬಿಡ್ ಗ್ರಾಮದಿಂದ ಕಾರ್ಮಿಕರನ್ನು ಕರೆತಂದಿದ್ದರು‌. ಇವರು ಮಧ್ಯಾಹ್ನ ಊಟದ ಸಮಯದಲ್ಲ ಪಕ್ಕದಜಮೀನಿನಲ್ಲಿ ಮರದ ಕೆಳಗೆ ಕುಳಿತು ಊಟ ಮಾಡುವುದಕ್ಕೆ ತೆರಳುತ್ತಿದ್ದರು.

ಈ ವೇಳೆ ಹರಿದು ಬಿದ್ದಿರವ ವಿದ್ಯತ್ ಲೈನ್ ತುಳಿದು ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಇನ್ನೋರ್ವ ಕಾರ್ಮಿಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ..

ಸ್ಥಳಕ್ಕೆ ಮುಂಡಗೋಡ ಕ್ರೈಂ ಪಿಎಸ್ಐ ಹನ್ಮಂತ್ ಗುಡುಗುಂಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ