ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರೆ ವರ್ಷಗಳಿಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹಳಷ್ಟು ಅಪಘಾತ ಆಗಿದೆ.428 ಕಿಲೋ‌‌ ಮೀಟರ್‌ನಲ್ಲಿ ಬರೋಬ್ಬರಿ‌ 589 ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು 428 ಕಿಲೋ‌‌ ಮೀಟರ್‌‌ ಅಂತರದಲ್ಲಿ ನಡೆದ‌ ರಸ್ತೆಯಲ್ಲಿ ಅಪಘಾತದಲ್ಲಿ 589 ಜನ‌‌‌ ಸಾವನಪ್ಪುವುದರೊಂದಿಗೆ ಹತ್ತು ಸಾವಿರಕ್ಕೂ ಹೆಚ್ಚು ಜನ ಕೈ ಕಾಲು ಕಳೆದುಕೊಂಡು ಅಂಗವಿಕಲತೆ ಅನುಭವಿಸುತ್ತಿದ್ದಾರೆ.‌ ಇನ್ನೂ ಜಿಲ್ಲೆಯ ಸಮಸ್ಯೆಗಳ ಕುರಿತು ಡಿಸಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೆನೆ.‌ಅಪಘಾತ ಪ್ರಕರಣವನ್ನ ಗಂಭೀರವಾಗಿ ಪರಗಣಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ.

ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿ 429 ಸ್ಥಳಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ. ಗುಡ್ಡ ಕುಸಿಯುವ ಸ್ಥಳಗಳ ಸುರಕ್ಷತೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಡಿಸಿ ಅವರಿಗೆ ತಿಳಿಸಿದ್ದೆನೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿ ತಾಣ ಇರುವುದರಿಂದ ಹೊಂ ಸ್ಟೆ ಗಳ ಸುರಕ್ಷತೆ ಬಗ್ಗೆ ಸಹ ಚರ್ಚೆ ಆಗಿದೆ.‌ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವಿದೇಶಿಗ‌ರ ಕುರಿತು ಮಾಹಿತಿ ಕಲೆ ಹಾಕುವಂತೆ ಹೇಳಿದ್ದೆನೆ. ಪ್ರತಿ ಒಬ್ಬ ಕಾನ್ಸ್ಟೆಬಲ್ ಕೂಡ ಸೈಬರ್ ಬಗ್ಗೆ ಮಾಹಿತಿ ಪಡೆಯುವಂತಾಗಬೇಕು ಎಂದಿದ್ದಾರೆ.

ರಾಜ್ಯದಲ್ಲೆ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಕೇಂದ್ರದಲ್ಲಿ ಸೈಬರ್ ಮಾಹಿತಿ ಕೇಂದ್ರ ಆರಂಭ ಆಗಿದೆ. ಎಸ್ ಪಿ ಎಂ ನಾರಾಯಣ ಗೆ ಅಭಿನಂದನೆ ತಿಳಿಸುತ್ತೆನೆ.ಎಸ್ ಪಿ ಎಂ ನಾರಾಯಣ ಬೇರೆ ಜಿಲ್ಲೆಗೆ ಮಾದರಿ ಆಗುವಂತ ಕೆಲಸ ಮಾಡಿದ್ದಾರೆ.‌ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈಬರ್ ಮಾಹಿತಿ ಕೇಂದ್ರ ಆರಂಭ ಆಗಬೇಕು ಎಂದು ಗೃಹ ಸಚಿವರು‌ ಸೂಚಿಸಿದ್ದಾರೆ.

ಇದನ್ನೂ ಓದಿ