ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಮಂಗಳೂರಿನಿಂದ ವಿಮಾನದ ಮೂಲಕ ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಭಟ್ಕಳ ಮೂಲದ ವ್ಯಕ್ತಿ ಅಬುಧಾಬಿ (Abu Dhabi) ವಿಮಾನ ನಿಲ್ದಾಣ ತಲುಪುವ ಒಂದು ಗಂಟೆ ಇರುವಾಗ ಹೃದಯಾಘಾತ ಉಂಟಾಗಿ ವಿಮಾನದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಟ್ಕಳದ ಸಮಾಜ ಸೇವಕ ಹಾಗೂ ಕೌನ್ಸಿಲರ್ ಆಗಿದ್ದ ಇರ್ಷಾದ್ ಇಕ್ಕೇರಿ ಅಲಿಯಾಸ್ ಡಾಟ ಇರ್ಷಾದ್ (67) ವಿಮಾನದಲ್ಲಿ ಅವರು ದುಬೈಗೆ ತೆರಳುವ ವೇಳೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.
ಅವರು ಮಂಗಳವಾರ ರಾತ್ರಿ 11 ಗಂಟೆಗೆ ಮಂಗಳೂರಿನಿಂದ ಅಬುಧಾಬಿಗೆ ಪತ್ನಿ ಮತ್ತು ಮಗಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಗುರುವಾರ ಮುಂಜಾನೆ,ಅಬುಧಾಬಿಗೆ ತಲುಪುವ ಒಂದು ಗಂಟೆ ಮೊದಲು ಅವರಿಗೆ ಹೃದಯಾಘಾತ ಸಂಭವಿಸಿತು.
ತಕ್ಷಣ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಮಾನವನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ( Muscat,) ತುರ್ತು ಭೂಸ್ಪರ್ಶ ಮಾಡಲಾಯಿತು. ಮೃತರನ್ನು ಮಸ್ಕತ್ ವಿಮಾನ ನಿಲ್ದಾಣದ (Airport) ಕ್ಲಿನಿಕ್ಗೆ ಕರೆದೊಯ್ಯಲಾಗಿದ್ದು, ಅವರ ಪತ್ನಿ ಮತ್ತು ಮಗಳು ಸಹ ಅಲ್ಲಿಯೇ ಇಳಿದಿದ್ದಾರೆ.
ಭಟ್ಕಳದ ಕಾರಗದ್ದೆ ನಿವಾಸಿಯಾಗಿದ್ದ ಇರ್ಷಾದ್ ಇಕ್ಕೇರಿ ಈ ಭಾಗದಲ್ಲಿ ಪರಿಚಿತ ವ್ಯಕ್ತಿಯಾಗಿದ್ದರು. ಅವರ ಪತ್ನಿ ಫರ್ಹಾನಾ ಡಾಟ, ಜಾಲಿ ಪಂಚಾಯತ್ ಸದಸ್ಯೆಯಾಗಿದ್ದು, ಈ ಮೊದಲು ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಸ್ಕತ್ನಲ್ಲಿರುವ ಅವರ ಕುಟುಂಬದ ಸದಸ್ಯರು, ಭಟ್ಕಳ ಮುಸ್ಲಿಂ ಜಮಾತ್ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಕೂಡಲೇ ವಿಮಾನ ನಿಲ್ದಾಣಕ್ಕೆ ತೆರಳಿ, ಮೃತ ದೇಹವನ್ನು ಸ್ವಾಧೀನಪಡಿಸಿಕೊಳ್ಳಲು ಅಗತ್ಯವಿರುವ ದಾಖಲೆ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ
ಇದನ್ನೂ ಓದಿ