ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ವೇತನ ಹೆಚ್ಚಳ,ಸೇವಾ ಭಧ್ರತೆ ಸೇರಿದಂತೆ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ನಗರದ ಫ್ರೀಡಂ ಫಾರ್ಕ್‌ನಲ್ಲಿ ಸಾವಿರಾರು ಗುತ್ತಿಗೆ ಸ್ಟಾಫ್ ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದು, ಸರಕಾರ ಕ್ಯಾರೇ ಎನ್ನುತ್ತಿಲ್ಲ.

ನಗರದ ಪ್ರಮುಖ ಸ್ಥಳವಾಗಿರುವ ಫ್ರೀಡಂ ಫಾರ್ಕ್‌ನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕು ಸೇರಿದಂತೆ ಗ್ರಾಮೀಣ ಭಾಗದ ಪ್ರಾರ್ಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ 8 ಸಾವಿರಕ್ಕೂ ಅಧಿಕ ಸ್ಟಾಫ್ ನರ್ಸ್‌ಗಳು ಕಳೆದ ಎರಡು ದಿನಗಳಿಂದ ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.ಅನೇಕ ಗರ್ಭಿಣಿ ಮಹಿಳೆಯರು, ಹಾಗೂ ಒಂದೇರಡು ತಿಂಗಳು ಹೇರಿಗೆ ಮಹಿಳೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ನಿತ್ಯವೂ ಇದೆ ರಸ್ತೆಯಲ್ಲಿ ಓಡಾಡುವ ಮುಖ್ಯಮಂತ್ರಿಗಳು ಸೇರಿದಂತೆ ಯಾವೊಬ್ಬ ಸಚಿವರು ಈಕಡೆ ತಲೆ ಹಾಕಿ ನೋಡುತ್ತಿಲ್ಲ.

ಇನ್ನೂ ಜಿಲ್ಲಾ ಆಸ್ಪತ್ರೆಯಿಂದ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ತನಕ ಸರಕಾರಿ ಸ್ಟಾಫ್ ನರ್ಸ್‌ಗಳಷ್ಟೆ ಕೆಲಸ ನಿರ್ವಹಿಸುವ ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್‌ಗಳ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ.ಇತ್ತ ರಾಜ್ಯಾದ್ಯಂತ ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯಾದ್ಯಂತ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವಂತಾಗಿದೆ.ರೋಗಿಗಳಿಗೆ ಸಮಸ್ಯೆ ಆಗತ್ತಾ ಇದ್ದರೂ ಸರಕಾರ ಕ್ಯಾರೇ ಎನ್ನುತ್ತಿಲ್ಲ.ಕಳೆದ ಅನೇಕ ವರ್ಷಗಳಿಂದ ಕೆಲಸಕ್ಕೆ ಸಮನಾದ ವೇತನ ಇಲ್ಲದೆ ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್‌ಗಳು ಸಮಸ್ಯೆ ಎದುರಿಸುತ್ತಿದ್ದಾರೆ.ಅವರವರ ಕುಟುಂಬ ನಿರ್ವಹಣೆ ಸಹ ಕಷ್ಟಕರವಾಗಿದೆ.

ಈ ವಿಚಾರವಾಗಿ ಸಚಿವರಾಗಿರುವ ದಿನೇಶ್‌ ಗುಂಡೂರಾವ್ ಅವರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ನಾಗಲಕ್ಷ್ಮೀ ಔಧರಿ ಅವರು ಸ್ಟಾಫ್ ನರ್ಸ್‌ಗಳ ಸಮಸ್ಯೆ ಬಗ್ಗೆ ಸಚಿವರಿಗೆ ಪತ್ರ ಕೂಡ ಬರೆದಿದ್ದಾರೆ. ಆದರೆ ಸಚಿವರು ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.ಸ್ಟಾಫ್ ನರ್ಸ್‌ಗಳು ಪತ್ರಿಭಟನೆಯಲ್ಲಿರುವುದರಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ‌. ಹೀಗಾಗಿ ರಾಜ್ಯದ ಸರಕಾರಿ ಆಸ್ಪತ್ರೆಗಳು ಇಂದು ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್‌ಗಳಿಂದಲ್ಲೆ ನಡೆಯುತ್ತಿದೆ ಎನ್ನುವುದು ಸಾಭೀತಾಗಿದೆ. ಆದರೂ ಸರಕಾರ ಗುತ್ತಿಗೆ ಆಧಾರಿತ ಸ್ಟಾಫ್ ನರ್ಸ್‌ಗಳ ಬಗ್ಗೆ ಕಾಳಜಿ ವಹಿಸದೆ ರೋಗಿಗಳ ಆರೋಗ್ಯದ ಜೊತೆ ಚಲ್ಲಾಟ ಆಡುತ್ತಿದೆ.

ಇದನ್ನೂ ಓದಿ