ಸುದ್ದಿಬಿಂದು ಬ್ಯೂರೋ ವರದಿ
ದೆಹಲಿ: ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 8 ಜಿಲ್ಲೆಗಳ 31.231 ಚದರ ಕಿಮೀ ಪ್ರದೇಶದಲ್ಲಿ ಮುಂದಿನ ದಿನದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಲಿದೆ ಎಂದು ಈ ಜಿಲ್ಲೆಗಳ 53% ಭಾಗ ಭೂಕುಸಿತ ಪ್ರದೇಶಕ್ಕೆ ಒಳಪಟ್ಟಿದ್ದು, ಹೆದ್ದಾರಿಗಳಲ್ಲೆ ಹೆಚ್ಚಿನ ಭೂ ಕುಸಿತ ಉಂಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2024ರ ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 11 ಜನರು ಮೃತಪಟ್ಟಿದ್ದರು. ಮಾಧ್ಯಮ ವರದಿಗಳ ಆಧಾರದ ಮೇಲೆ, NGT ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿತು. ಕಂದಾಯ ಇಲಾಖೆಗೆ ನೋಟಿಸ್ ನೀಡಿದ ಪೀಠವು,ಈ ದುರಂತದ ಕುರಿತು ವರದಿ ಸಲ್ಲಿಸುವಂತೆ ಎಚ್ಚರಿಸಿತು.
ಭಾರತೀಯ ಭೂಗರ್ಭ ಸರ್ವೇಕ್ಷಣಾ ಸಂಸ್ಥೆಯ ವಿವಿಧ ವರದಿಗಳ ಆಧಾರದ ಮೇಲೆ, ಆದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗವು ಈ ಬಗ್ಗೆ ವರದಿ ಸಿದ್ಧಪಡಿಸಿ, ರಾಷ್ಟ್ರೀಯ ಹಸಿರು ತೀರ್ಪುಗಾರ ಮಂಡಳಿಗೆ (NGT) ಸಲ್ಲಿಸಿದೆ.
ಕಳೆದ ವರ್ಷ(2024)ರ ಮಳೆಗಾಲದಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು, ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತಗಳ ಕಾರಣಗಳು ಮತ್ತು ರಾಜ್ಯ ಸರ್ಕಾರ ಕೈಗೊಂಡ ತಾತ್ಕಾಲಿಕ ಹಾಗೂ ದೀರ್ಘಕಾಲಿಕ ತಿದ್ದುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಭೂಕುಸಿತಗಳ ಕುರಿತ ಹಲವಾರು ಅಧ್ಯಯನಗಳು ಭೂಕುಸಿತಕ್ಕೆ ಕಾರಣಗಳ ಪಟ್ಟಿಯನ್ನು ನೀಡಿವೆ. ಇದಕ್ಕೆ ಪರಿಹಾರಗಳೂ ಉಲ್ಲೇಖಿಸಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಒಟ್ಟು 58,766 ಚದರ ಕಿಮೀ ವ್ಯಾಪ್ತಿಯ ಎಂಟು ಜಿಲ್ಲೆಗಳ ಪೈಕಿ, 96% ಪ್ರದೇಶ ಕೊಡಗಿನಲ್ಲಿ, 94% ದಕ್ಷಿಣ ಕನ್ನಡದಲ್ಲಿ ಮತ್ತು 81% ಉತ್ತರ ಕನ್ನಡದಲ್ಲಿ ಭೂಕುಸಿತ ಸಂಭವಿಸುವ ಅಪಾಯ ಪ್ರದೇಶಕ್ಕೆ ಸೇರಿದ್ದಾಗಿದೆ. 2006 ರಿಂದ 2023ರವರೆಗೆ ರಾಜ್ಯದಲ್ಲಿ 1,405 ಭೂಕುಸಿತ ಪ್ರಕರಣಗಳು ವರದಿಯಾಗಿದ್ದು, 360 ಪ್ರಕರಣಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. ಈ ಅಪಘಾತಗಳಲ್ಲಿ 98 ಜನರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಭಾಗದಲ್ಲಿ ಭೂಮಿ ಕುಸಿತ ಉಂಟಾಗಲು ಪ್ರಮುಖವಾಗಿ ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಭಾರೀ ಪ್ರಮಾಣದಲ್ಲಿ ಮಳೆಗಾದ ಸಮಯದಲ್ಲಿ ನಿರಂತರವಾಗಿ ಮಳೆ ಸುರಿಯುವುದು, ಅರಣ್ಯ ಪ್ರದೇಶಗಳನ್ನ ಒತ್ತುವರಿ ಮಾಡುವ ಕಾರಣ ಈ ಹಿಂದೆ ಹರಿಯುತ್ತಿದ್ದ ನೀರಿನ ದಿಕ್ಕುಗಳನ್ನ ಬದಲಿಸುತ್ತಿರುವುದರಿಂದ ಈ ರೀತಿಯಾಗಿ ಭೂಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ..
ಇದನ್ನೂ ಓದಿ