ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಮಾಸ್ಟರ್ ಎಂದರೆ ಹೇಗಿರಬೇಕು ಎನ್ನುವುದಕ್ಕೆ ದಿ. ಪಿ. ಆರ್. ಬಂಗಾಲಿ ಮಾಸ್ಟರ್ ಅತ್ಯುತ್ತಮ ಉದಾಹರಣೆ. ಯಾಕೆಂದರೆ ಬಂಗಾಲಿ ಮಾಸ್ಟರ್ ಬಳಿ ಕೆಲ ದಶಕಗಳ ಹಿಂದೆ ಶಿಕ್ಷಣ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ಜೀವನ ಪಾಠದ ಜೊತೆಗೆ ಈಗ ಉತ್ತಮೋತ್ತಮ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರ್ಯಾರು ಬಂಗಾಲಿ ಮಾಸ್ಟರ್ ಅವರನ್ನು ಮರೆತಿಲ್ಲ. ಯಾಕೆಂದರೆ ಬಂಗಾಲಿ ಮಾಸ್ಟರ್ ಆಗಿನ ಮಕ್ಕಳ ಸ್ಮøತಿ ಪಟಲದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು ಎನ್ನುವುದಕ್ಕಿಂದ ಬೇರೂರಿದ್ದಾರೆ ಎನ್ನುವುದೇ ಹೆಚ್ಚು ಸೂಕ್ತ.
ಬಂಗಾಲಿ ಮಾಸ್ಟರ್ ತನ್ನ ಶಿಕ್ಷಣ ವೃತ್ತಿಯನ್ನು ಕೇವಲ ಮಕ್ಕಳ ಕಲಿಕೆಗೆ ಮಾತ್ರ ಬಳಸಿಕೊಳ್ಳಲಿಲ್ಲ. ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಸೂಕ್ಷ್ಮವಾಗಿ ಹೊರತೆಗೆಯುವ ಮೂಲಕ ಇಡೀ ಶಾಲೆಯನ್ನೇ “ಸಾಂಸ್ಕøತಿಕ ದೇಗುಲ”ವನ್ನಾಗಿ ಮಾಡುವ ಕಲೆ ಬಂಗಾಲಿ ಮಾಸ್ಟರ್ ಅವರಿಗೆ ಸಿದ್ಧಿಸಿತ್ತು. ಬಂಗಾಲಿ ಮಾಸ್ಟರ್ ಅವರು ಸೇವೆ ಸಲ್ಲಿಸಿದ ಯಾವ ಶಾಲೆಗೆ ಹೋದರೂ ಅವರ ಹೆಜ್ಜೆ ಗುರುತನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆ ಕುಮಟಾ ಪಟ್ಟಣದ ಗುಡಿಗಾರಗಲ್ಲಿ ಶಾಲೆ.
ಗುಡಿಗಾರಗಲ್ಲಿಯ ಹಿರಿಯ ಪ್ರಾಥಮಿಕ ಶಾಲೆ ಇತ್ತೀಚೆಗೆ ಶತಮಾನವನ್ನು ಪೂರೈಸಿ ಶತಮಾನೋತ್ತರ ಸಂಭ್ರಮ ಆಚರಿಸಿಕೊಂಡಿದೆ. ಈ ಸಂಭ್ರಮದಲ್ಲಿ ಭಾಗಿಯಾದ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಕೂಡ ವೇದಿಕೆಯಲ್ಲಿ ಬಂಗಾಲಿ ಮಾಸ್ಟರ್ ಅವರ ಸೇವೆ, ಅವರ ಕ್ರಿಯಾಶೀಲತೆ ನೆನೆದರು. ಬಂಗಾಲಿ ಮಾಸ್ಟರ್ ಅವರು ಸೇವೆ ಸಲ್ಲಿಸಿದ ಗುಡಿಗಾರಗಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬಂಗಾಲಿ ಮಾಸ್ಟರ್ ಅವರ ಮಗ ಗಜಾನನ ಪಿ. ಬಂಗಾಲಿ ಅವರು ಕಳೆದ ವರ್ಷ 1 ಲಕ್ಷ ರೂಪಾಯಿ ಹಣವನ್ನು ಠೇವಣಿ ಇಟ್ಟಿದ್ದರು. ಅದರ ಬಡ್ಡಿ ಹಣದಿಂದ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿಗೆ, ಒಟ್ಟು ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನದ ರೂಪದಲ್ಲಿ ಆರ್ಥಿಕ ನೆರವು ನೀಡುತ್ತಿದ್ದು, ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಪ್ರತಿಭಾವಂತ ಬಾಲಕ ಹರ್ಷಲ್ ಅಮರನಾಥ ನಾಯ್ಕ ಮತ್ತು ಪ್ರತಿಭಾವಂತ ಬಾಲಕಿ ಸಿಂಧು ಶಿವಾನಂದ ನಾಯ್ಕ ಇವರಿಬ್ಬರಿಗೆ ನೀಡಲಾಗಿದೆ.
ಬಂಗಾಲಿ ಮಾಸ್ಟರ್ ಹೆಸರಿನಲ್ಲಿ ಅವರ ಮಗ ಗಜಾನನ ಪಿ. ಬಂಗಾಲಿ ಅವರು ನೀಡಿದ ಪ್ರೋತ್ಸಾಹವನ್ನು ನಾವು ಎಂದು ಮರೆಯುವುದಿಲ್ಲ ಎಂದು ಬಹುಮಾನ ಪಡೆದ ವಿದ್ಯಾರ್ಥಿಗಳ ಪೋಷಕರು “ಸುದ್ದಿಬಿಂದು”ಗೆ ತಿಳಿಸಿದ್ದಾರೆ.
ಇದನ್ನೂ ಓದಿ