ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಳೆದ ವರ್ಷ ಅಗಷ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದನ್ನ ಸರಿದೂಗಿಸಲು ಪ್ರತಿ ಶನಿವಾರ ಪೂರ್ತಿದಿನ ಶಾಲೆಗಳನ್ನ ನಡೆಸಲಾಗುತ್ತಿತ್ತು. ಆದರೆ ಈಗ ಆ ಎಲ್ಲಾ ರಜೆಗಳು ಸರಿದೂಗಿಸಲಾಗಿದ್ದು, ಇನ್ನೂ ಮುಂದೆ ಈ ಹಿಂದಿನಂತೆ ಶನಿವಾರದಂದು ಅರ್ಧ ದಿನ ಶಾಲೆ ನಡೆಸುವಂತೆ ಉತ್ತರಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.
