ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವಹೇಳನ ಹಾಗೂ ಮಾನಹಾನಿಕರ‌ವಾದ ಹೇಳಿಕೆ ನೀಡಿರುವ ಕುರಿತು ಅನಂತಮೂರ್ತಿ ಹೆಗಡೆ ವಿರುದ್ಧ ಕಾಂಗ್ರೆಸ್ ಮುಖಂಡರು ನಗರದ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಕರ್ನಾಟಕದಲ್ಲಿ ಜನಪ್ರತಿನಿಧಿ ಕಾಯಿದೆ ಅಡಿಯಲ್ಲಿ ಚುನಾಯಿತರಾದ 224 ಶಾಸಕರು ಸುಳ್ಳು ಹೇಳುವರೆಂದು ಮತ್ತು ಅದರಲ್ಲಿ ಅತೀ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿಯನ್ನು ಶಾಸಕ ಭೀಮಣ್ಣ ನಾಯ್ಕರಿಗೆ ನೀಡಬೇಕೆನ್ನುವ ಉದ್ದೇಶ ಪೂರ್ವಕವಾದ ಹೇಳಿಕೆಯನ್ನು ನೀಡಿದ್ದಾರೆ.ಈ ಹೇಳಿಕೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಬಂಗಮಾಡಿ ಜನರಲ್ಲಿ ದೊಂಬಿ ಎಬ್ಬಿಸುವ ಉದ್ದೇಶದಿಂದ ಪ್ರಚೋದನಾಕಾರಿ ಹೇಳಿಕೆಯಾಗಿದೆ.‌

ನೆಮ್ಮದಿಗೆ ಹಾಗೂ ರಾಜ್ಯದಲ್ಲಿಯ ಸುವ್ಯವಸ್ಥಿತ ಕಾನೂನು ವ್ಯವಸ್ಥೆಯನ್ನು ಭಂಗಮಾಡಿ, ರಾಜ್ಯದ ಜನರಲ್ಲಿ ದೊಂದೆ ಮಾಡಿಸಬೇಕೆಂಬ ಉದ್ದೇಶದಿಂದ ಅನಂತಮೂರ್ತಿ ಹೆಗಡೆ ತಮ್ಮ ಪ್ರಚೋದನಕಾರಿ ಹೇಳಿಕೆಯ ಮೂಲಕ ಸಮಾಜದಲ್ಲಿ ತಪ್ಪು ಮಾಹಿತಿಯನ್ನು ಹರಡಿಸಿರುತ್ತಾರೆ. ಅನಂತಮೂರ್ತಿ ಹೆಗಡೆಯವರ ಹೇಳಿಕೆ ಅಪರಾಧಿಕ ಹೇಳಿಕೆಯು ಶಿಕ್ಷಾರ್ಹ ಅಪರಾಧವಾಗಿದ್ದು, ಅದನ್ನು ಕಾನೂನಿನ ಮೂಲಕ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಅನಂತಮೂರ್ತಿ ಹೆಗಡೆಯವರ ಹೇಳಿಕೆಯಾದ ” ರಾಜ್ಯದ 1 ಶಾಸಕರಲ್ಲಿ ಹೆಚ್ಚು 224 ಹೇಳುವ ಶಾಸಕ ಪ್ರಶಸ್ತಿ ಏನಾದರೂ ಇದ್ದರೆ, ಅದನ್ನು ಶಿರಸಿಯ ಶಾಸಕ ಭೀಮಣ್ಣ ನಾಯ್ಕರಿಗೆ ಕೊಡಬೇಕು” ಎನ್ನುವ ಕಿಡಗೇಡಿತನದ ಅವರ ಹೇಳಿಕೆಯ ಹಿಂದೆ ಒರ್ವ ಸರಕಾರಿ ಆಸ್ಪತ್ರೆಯ ವೈದ್ಯರನ್ನು ರಕ್ಷಣೆ ಮಾಡುವ ಹುನ್ನಾರವಿರುತ್ತದೆ. ಅನಂತಮೂರ್ತಿ ಹೆಗಡೆ ಸೇರಿ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 352, 353 R/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಮಾಜದಲ್ಲಿ ಶಾಸಕರ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ.ಆದ್ದರಿಂದ ಅವರ ಮೇಲೆ ಹಾಗೂ ಅವರ ಜೊತೆಗಿದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಫ್ ಆಯ್ ಆರ್ ನಲ್ಲಿ ದಾಖಲಿಸಲಾಗಿದೆ. ಈ ಪ್ರಕರಣವನ್ನು ಪಿಎಸ್ಆಯ್ ನಾಗಪ್ಪ ಬಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ