ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಅಲಗೇರಿ, ಅಂಕೋಲಾ (airport ವಿಮಾನ ನಿಲ್ದಾಣ ನಿರ್ಮಾಣದ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಪ್ರಕ್ರಿಯೆಗಳು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಈಗಾಗಲೇ ಅಂಕೋಲಾದ ಅಲಗೇರಿ, ಬಾವಿಕೇರಿ, ಬೆಳೇಕೇರಿ ಗ್ರಾಮಗಳಲ್ಲಿ 97 ಎಕರೆ ಭೂಮಿಯನ್ನು ಸ್ವಾಧೀನ ಮಾಡಲಾಗಿದೆ. ಸ್ಥಳೀಯರ ಬೇಡಿಕೆಯ ಮೇರೆಗೆ ಸರ್ಕಾರ ಹೆಚ್ಚುವರಿ ಪರಿಹಾರವನ್ನು ಒಪ್ಪಿಕೊಂಡಿದ್ದು,11ಕೋಟಿ ರೂ.ಕೆಲವು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ವಿಮಾನ ನಿಲ್ದಾಣಕ್ಕಾಗಿ ಮತ್ತಷ್ಟು 6.5 ಎಕರೆ ಭೂಮಿ ಅಗತ್ಯವಿದ್ದು, ಈ ಭೂಮಿಯ ಪಕ್ಕದ ಖಾಸಗಿ ಜಮೀನಿನ ಸ್ವಾಧೀನಕ್ಕಾಗಿ ಅಧಿಸೂಚನೆ ಜಾರಿ ಮಾಡಲಾಗಿದೆ. ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದ್ದು, ಅಂತಿಮ ಅಧಿಸೂಚನೆ ಶೀಘ್ರದಲ್ಲೇ ಹೊರಡಿಸಲಾಗುತ್ತದೆ.ಅಚಾರಿ ಮತ್ತು ಸೋನಾರಾ ಸಮುದಾಯಗಳು ತಮ್ಮ ನೆಲೆಗಳಲ್ಲಿ ಜಮೀನು ನೀಡುವಂತೆ ವಿನಂತಿಸಿಕೊಂಡಿವೆ. ಕೆಲವು ಗೊಂದಲಗಳಿದ್ದು, ಚರ್ಚಿಸಿ ಅದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಸೈಟ್ ಹಂಚಿಕೆಯನ್ನು ಚೀಟಿ ಎಳೆಯುವ ಮೂಲಕ ಮಾಡಲಾಗುವುದು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿ ನಿಟ್ಟಿನಲ್ಲಿ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ನಿರಾಶ್ರಿತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಮನೆಗಳ ಮತ್ತು ಆಸ್ತಿ ಸಮೀಕ್ಷೆಯಲ್ಲಿ ವೈಷಮ್ಯಗಳ ಬಗ್ಗೆ ದೂರು ಬಂದಿದ್ದು, ಪುನಃ ಸಮೀಕ್ಷೆ ಮಾಡಲು ಸಲಹೆ ನೀಡಲಾಗಿದೆ.

ಗಮನಿಸಿ