ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಬೆಂಗಳೂರಿನ ವಿಜನಗರದಲ್ಲಿ‌ ನಡೆದ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೆ ಇದೀಗ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಗರ್ಭಿಣಿ ಆಕಳನ್ನು ಕಡಿದು, ಗರ್ಭದ ಒಳಗೆ ಇರುವ ಕರುವನ್ನು ಬಿಸಾಡಿ ಹೋದ ಅಮಾನವೀಯ ಕೃತ್ಯ ನಡೆದಿದೆ..

ಸಾಲ್ಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂಡಾಕುಳಿಯಲ್ಲಿ ಕೃಷ್ಣ ಆಚಾರಿ ಎಂಬುವವರ‌ ಆಕಳು ಇದಾಗಿದ್ದು,ಮೇವಿಗಾಗಿ ಹೋಗಿದ್ದ ಸಂದರ್ಭದಲ್ಲಿ ದುರುಳರು ಗರ್ಭದವಿದ್ದ ಆಕಳ ತಲೆ,ಕಾಲುಗಳ ಮೂಳೆಗಳನ್ನ ಬೆರ್ಪಡಿಸಿ ಬಿಸಾಕಿ ಹೋಗಿದ್ದಾರೆ. ಮಾಂಸದ ಅಂಗಡಿಯಲ್ಲಿ ಕತ್ತರಿಸಿದಂತೆ ಕತ್ತರಿಸಿ ಮೂಳೆ ಬೆರ್ಪಡಿಸಿ ಮಾಂಸವನ್ನಷ್ಟೆ ಸಾಗಾಟ ಮಾಡಲಾಗಿದೆ.

ಘಟನೆ‌ ಸಂಬಂದ ಪೊಲೀಸ್‌ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ತಾಲೂಕು ಬೆಚ್ಚಿ ಬಿಳಿಸಿದ ಘಟನೆ ಜನರು ಕಂಗಾಲಾಗಿದ್ದಾರೆ.

ಇದನ್ನೂ ಓದಿ