ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ
: ಗಣೇಶ ಗುಡಿ ಇಳವಾ ವೈಟ್ ವಾಟರ್ ರೆಸಾರ್ಟ್ ‌ಗೆ (Ganesh Gudi Ilawa White Water Resort ) ಬೈಸನ್ ರೆಸಾರ್ಟ್‌ನವರ ಜಟ್ಟಿ ಬಳಸಿ ಜಲ ಸಾಹಸ ಕ್ರೀಡೆ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.(
Uttarkannada Resort)

ರಾಮನಗರ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.ಜೊಯಿಡಾ ತಾಲೂಕು ಗಣೇಶಗುಡಿ ಸನಿಹ ಇಳವಾದಲ್ಲಿರುವ ವೈಟ್ ವಾಟರ್ ಗೆ ಬೈಸನ್ ಜಟ್ಟಿ ಬಳಸಿ ಜಲ ಸಾಹಸ ಕ್ರೀಡೆ ನಡೆಸುತ್ತಿದೆ ಹಾಗೂ ರಾಫ್ಟಿಂಗ್ ನಡೆಸುತ್ತಿದೆ.ಅಲ್ಲದೆ ಬೈಸನ್ ರೆಸಾರ್ಟ್‌ನವರು ಜಲ ಸಾಹಸ ಕ್ರೀಡೆ ಅನುಮತಿ ಇಲ್ಲದೆ ನಡೆಸುತ್ತಿದ್ದಾರೆಂದು ರಾಮನಗರ ಪೊಲೀಸ್ ಠಾಣೆಯಲ್ಲಿ ಎಲ್ ಪಿಟಿಶನ್ ಡಿ.24 ರಂದು ದಾಖಲಾಗಿತ್ತು. ಈ ದೂರು ಆಧರಿಸಿ, ವೈಟ್ ವಾಟರ್ ಮತ್ತು ಬೈಸನ್ ರೆಸಾರ್ಟ ಗೆ ಜಲ ಸಾಹಸ ಕ್ರೀಡೆಗೆ ಅನುಮತಿ ನೀಡಲಾಗಿದೆಯೇ ಎಂದು ರಾಮನಗರ ಪೊಲೀಸರು , ಪ್ರವಾಸೋದ್ಯಮ ಇಲಾಖೆಯಿಂದ ಸ್ಪಷ್ಟೀಕರಣ‌ ಕೇಳಿದ್ದರು.

ಡಿ.26 ರಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮನಗರ ಪೊಲೀಸರಿಗೆ ಲಿಖಿತ ಮಾಹಿತಿ ನೀಡಿದ್ದು, ವೈಟ್ ವಾಟರ್ ರೆಸಾರ್ಟನವರು ಜಲಸಾಹಸ ಕ್ರೀಡೆ ನಡೆಸಲು ಅನುಮತಿ ಪಡೆದಿಲ್ಲ ಹಾಗೂ ಬೈಸನ್ ರೆಸಾರ್ಟ ಜಟ್ಟಿ ಬಳಸಲು ಸಹ ಅನುಮತಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ ಬೈಸನ್ ರೆಸಾರ್ಟ ನವರು ಸಹ ಜಲ ಸಾಹಸ ಕ್ರೀಡೆ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಜೊಯಿಡಾ ತಾಲೂಕಿನ ರಾಮನಗರ ಪೊಲೀಸರಿಗೆ ತಿಳಿಸಿದ್ದಾರೆ.

ಗಮನಿಸಿ