ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ
: ಪಿಗ್ಮಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹಂಚು ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ ಮನೆಯಲ್ಲಿದ್ದ ಪಿಗ್ಮಿ ಹಣವನ್ನ ದೋಚಿಕೊಂಡು ಹೋಗಿರುವ ಘಟನೆ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ನಡೆದಿದೆ.

ಗೀತಾ ಪ್ರಭಾಕರ್ ಹುಂಡೇಕರ್ (72) ಕೊಲೆಯಾದ ಮಹಿಳೆಯಾಗಿದ್ದಾಳೆ.ಈಕೆ ವಿನಾಯಕ ಸೌಹಾರ್ದಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.‌ಇವರು ನಿತ್ಯವೂ ಐದರಿಂದ ಹತ್ತು ಸಾವಿರದ ತನಕ ಪಿಗ್ಮಿ ಹಣ ಸಂಗ್ರಹಿಸುತ್ತಿದ್ದು, ಪಿಗ್ಮಿಕಲೆಕ್ಟ್ ಮಾಡಿದ ಹಣವನ್ನ ಮರುದಿನ ಬ್ಯಾಂಕ್‌ಗೆ ಜಮಾ‌ ಮಾಡುತ್ತಿದ್ದರು. ಮಹಿಳೆಯ ಬಳಿ ಹಣ ಇರುವುದನ್ನ ಖಚಿತ ಪಡಿಸಿಕೊಂಡ ದುಷ್ಕರ್ಮಿಗಳು ಮಹಿಳೆಯ ಬಚ್ಚಲ‌‌ ಮನೆಯ ಹಂಚು ತೆಗೆದು ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಆಕೆಯ ಬಳಿಯಿಂದ ಹಣವನ್ನ ಕದ್ದು ಪರಾರಿಯಾಗಿದ್ದಾರೆ.

ಈ ಬಗ್ಗೆ ಮೃತ ಮಹಿಳೆಯ ಅಳಿಯ ರಾಘವೇಂದ್ರ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗಮನಿಸಿ