ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಸದಸ್ಯರ ಸೇರ್ಪಡೆಗೆ ಆನ್ಲೈನ್ನ ಮೂಲಕ ಅರ್ಜಿ ಸಲ್ಲಿಸಲು ಸರಕಾರ ಈ ತಿಂಗಳ ಕೊನೆ ತನಕ ಅವಕಾಶ ನೀಡಿದೆ.ಆದರೆ ಸಂಬಂಧಿಸಿದ ಆನ್ಲೈನ್ ಸೆಂಟರ್ಗಳಿಗೆ ಹೋದರೆ ಗ್ರಾಹಕರು ವಾಪಾಸ್ ಆಗಬೇಕಾದ ಪರಿಸ್ಥಿತಿ ಉಂಟಾಗುತ್ತಿದ್ದು, ಇದೊಂದು ರೀತಿಯಲ್ಲಿ ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಸರಕಾರದ ರೇಷನ್ ಕಾರ್ಡ್ ತಿದ್ದುಪಡಿ ಆದೇಶ
ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆಯಲ್ಲಿಯೂ ರೇಷನ್ ಕಾರ್ಡ್ಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಸೃಷ್ಟಿಯಾಗಿತ್ತು.ಇದೀಗ ನಿಮ್ಮ ರೇಷನ್ ಕಾರ್ಡ್ನಲ್ಲಿ ನಿರ್ದಿಷ್ಟವಾಗಿ ಯಾವುದಾದರೂ ಮಾಹಿತಿ ಇಲ್ಲವೇ ವಿಳಾಸ ಹಾಗೂ ಕುಟುಂಬದವರ (ಸದಸ್ಯರ)ವಿವರ ತಪ್ಪಾಗಿದ್ದಾರೆ ಹಾಗೂ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಆನ್ಲೈನ್ನ ಮೂಲಕ ಬದಲಾವಣೆ ಮಾಡಿಕೊಳ್ಳಲು ರೇಷನ್ ಕಾರ್ಡ್ದಾರರಿಗೆ ಅವಕಾಶ ನೀಡಲಾಗಿದೆ.ಹೀಗಾಗಿ ಸರಕಾರ ರೇಶನ್ಕಾರ್ಡ್ ತಿದ್ದು ಪಡೆ ಮಾಡಲು ಕಾಲಾವಕಾಶ ನೀಡಿದ್ದರು. ಸಹ ರೇಶನ್ ಕಾರ್ಡ್ದಾರರು ಪರದಾಟ ನಡೆಸಬೇಕಾಗಿರುವ ಪರಿಸ್ಥಿತಿ ತಪ್ಪಿಲ್ಲ.
ಡಿಸೆಂಬರ್ 31ರ ತನಕ ರೇಶನ್ಕಾರ್ಡ್ಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಮಾಡಲು ಸರಕಾರ ಅವಕಾಶ ನೀಡಿರುವ ಕಾರಣ ಸರಕಾರದ ಈ ಆದೇಶದ ಬಳಿಕ ನಿತ್ಯವೂ ರೇಶನ್ ಕಾರ್ಡ್ದಾರರು ಆಯಾ ಆನ್ಲೈನ್ ಸೆಂಟರ್ ಬಳಿ ಬೆಳಿಗ್ಗೆಯಿಂದ ಸಂಜೆ ತನಕ ಕಾದು ಕಾದು ವಾಪಸ್ ಆಗಬೇಕಾಗಿದೆ. ಇನ್ನೂ ಕೆಲವು ಕಡೆಯತ್ತು ನಿತ್ಯವೂ ಸರ್ವರ್ ಸಮಸ್ಯೆ ಉಂಟಾಗುತ್ತಿತ್ತು.
ನಿತ್ಯ ಹತ್ತು ರೇಶನ್ ಕಾರ್ಡ್ದಾರರ ಸಮಸ್ಯೆ ಬಗೆ ಹರಿಯದಂತಾಗಿದೆ.ಒಂದು ಕಡೆ ರೇಶನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದೆ,
ಸರ್ವರ್ ಸಮಸ್ಯೆಯಿಂದ ಕಾರ್ಡ್ ಹೊಂದಿರುವವರು ಅತ್ತ ತಿದ್ದುಪಡಿಯೂ ಆಗತ್ತದೆ ಇತ್ತ ದುಡಿಯಲು ಹೋಗಲು ಆಗದೆ ಅಲೆದಾಟ ನಡೆಸಬೇಕಾಗಿದೆ. ಇದು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವಂತಾಗಿದೆ.
ಗಮನಿಸಿ