ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಾಲ್ವರು ಪ್ರವಾಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದ್ದ ಮುರುಡೇಶ್ವರ ಕಡಲ ತೀರ ನಾಳೆಯಿಂದ ಪ್ರವಾಸಿಗರಿಗೆ ಮುಕ್ತವಾಗಿಲಿದೆ.
ಕಳೆದ ಡಿಸೆಂಬರ್ ಹತ್ತರಂದು ಕೋಲಾರದ ಮುಳಬಾಗಿನಿಂದ ಪ್ರವಾಸಕ್ಕೆ ಬಂದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಇದಾದ ಬಳಿ ಉತ್ತರ ಕನ್ನಡ ಜಿಲ್ಲಾಡಳಿತ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಹಾಕಿತ್ತು.ಇದರಿಂದಾಗಿ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ನಿರಾಶೆಯಿಂದ ವಾಪಸ್ ಆಗುವಂತಾಗಿತ್ತು.
ಇದೀಗ ಕ್ರಿಸ್ಮಸ್ ಹಾಗೂ ಇಯರ್ ಎಂಡ್ ಇರುವ ಕಾರಣಕ್ಕೆ ರಾಜ್ಯ ಸೇರಿದಂತೆ ದೇಶದ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಮುರುಡೇಶ್ವರ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಮುರುಡೇಶ್ವರ ಕಡಲ ತೀರಕ್ಕೆ ಬರುವ ಪ್ರಾಸಿಗರಿಗೆ ನಿರ್ಧಿಷ್ಟ ಸ್ಥಳಗಳನ್ನ ಗುರುತಿಸಿ ಪ್ರವಾಸಿಗರಿಗೆ ಕಡಲತೀರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲು ಜಿಲ್ಲಾಡಳಿತ ತಿರ್ಮಾನಿಸಿದೆ..
ಗಮನಿಸಿ
- ಕರಾವಳಿಯಲ್ಲಿ ಭಾರೀ ಮಳೆ: ನಾಳೆ ಎಲ್ಲೆಲ್ಲಿ ಶಾಲೆ–ಕಾಲೇಜುಗಳಿಗೆ ರಜೆ?
- ಮಂಗನ ಕಾಯಿಲೆ ನಿಯಂತ್ರಣಕ್ಕೆ ಸರ್ಕಾರ ಬದ್ಧ: ಉನ್ನತ ಮಟ್ಟದ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ
- ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ : ಬೈಕ್ ಸವಾರನ ಮೇಲೆ ಬಿದ್ದ ಮರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು,
- ಮೆಹೆಂದಿ ರಂಗು ಮಾಸುವ ಮುನ್ನವೇ ವಿಧಿಯ ಕ್ರೂರ ಆಟ: ಬೈಕ್ ಸ್ಕಿಡ್ ನವವಧು ಸ್ಥಳದಲ್ಲೇ ಸಾವು, ಪತಿ ಗಂಭೀರ..!

