ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿದ್ದು,ಗುತ್ತಿಗೆ ಪಡೆದ ಆರ್ಎನ್ಎಸ್ ಕಂಪನಿ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನ ಬಂದ್ ಮಾಡಲು ಹೊರಟಿದೆ. ಆದರೆ ಯಾವುದೇ ಕಾರಣಕ್ಕೂ ರಸ್ತೆ ಬಂದ್ ಮಾಡಿ ಕಾಮಗಾರಿ ಮಾಡಬಾರದೆಂದು ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಒತ್ತಾಯಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಗಿದೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಸೇತುವೆ ಕಾಮಗಾರಿ ಹೊರತುಪಡಿಸಿ ಸಾಕಷ್ಟು ಕಾಮಗಾರಿಯು ಮಾಡುವುದಿದೆ ಆದರೆ ಸೇತುವೆ ಕಾಮಗಾರಿಯ ನೇಪ ಹೇಳಿ ಗುತ್ತಿಗೆ ಪಡೆದ ಆರ್ ಎನ್ ಎಸ್ ಕಂಪನಿ ಅವರು ಕುಮಟಾ ಶಿರಸಿ ರಸ್ತೆಯನ್ನು ಬಂದ್ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಡ ತರುತ್ತಿದ್ದಾರೆ ದಯವಿಟ್ಟು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕಂಪನಿಯ ಒತ್ತಡಕ್ಕೆ ಮಣಿದು ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದು.
ಒಂದು ವೇಳೆ ಅನುಮತಿ ನೀಡಿದರೆ ಕನಿಷ್ಠ ಮೂರು ವರ್ಷಗಳ ಕಾಲ ಶಿರಸಿ ಕುಮುಟ ರಸ್ತೆ ಬಂದ ಆಗುತ್ತದೆ. ದಯವಿಟ್ಟು ವಿಶೇಷವಾಗಿ ಕುಮಟಾ ಶಿರಸಿ ರಸ್ತೆ ಯುದ್ದಕ್ಕೂ ಕೃಷಿ ಬದುಕನ್ನೇ ನಂಬಿಕೊಂಡು ಇರುವ ಸಾವಿರಾರು ಕೃಷಿಕರು ಸಂಚಾರಕ್ಕೆ ಪರದಾಡುವ ಸ್ಥಿತಿ ಉಂಟಾಗುತ್ತದೆ ದಯವಿಟ್ಟು ಸಿರಸಿ ಕುಮಟಾ ರಸ್ತೆಯನ್ನ ಅಭಿವೃದ್ಧಿಯ ಹೆಸರಿನಲ್ಲಿ ಬಂದ್ ಮಾಡಕೂಡದು ಅಭಿವೃದ್ಧಿಗೆ ವಿರೋಧವಾಗಿದೆ.
ಈಗಾಗಲೆ ಮಳೆಗಾಲ ಮುಗಿದಿದೆ ಸೇತುವೆ ಕಾಮಗಾರಿ ಮಾಡಬಹುದು ಹೀಗಾಗಿ ಜಿಲ್ಲಾಡಳಿತ ಕಾಮಗಾರಿ ಕಂಪನಿಗೆ ರಸ್ತೆ ಬಂದ್ ಮಾಡಲು ಅನುಮತಿ ನೀಡಬಾರದು ಒಂದುವೇಳೆ ಬಂದ್ ಮಾಡಲು ಅವಕಾಶ ನೀಡಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಮನಿಸಿ