ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಶಿರಸಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಡಾ, ಗಜಾನನ ಭಟ್ ಅವರನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಾರ್ವಜನಿಕರು ಇಂದು ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ..

ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಗಜಾನನ ಭಟ್ ಇವರಿಗೆ ಕಳೆದ‌‌ ಎರಡು‌ ತಿಂಗಳ‌ ಹಿಂದೆ 19/07/2024 ರಂದು ಸರ್ಕಾರ ನಡೆಸಿದ ವರ್ಗಾವಣೆಯ ಕೌನ್ಸಿಲಿಂಗ್ ನಲ್ಲಿ ತಾವೇ ಕುದ್ದು ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು.ನಂತರ ಸರ್ಕಾರ ವರ್ಗಾವಣೆ ಆದೇಶ ಹೋರಡಿಸಿತು, ನಂತರ 29/08/2024 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ,ಗಜಾನನ ಭಟ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ,ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯ ಪ್ರಭಾರವನ್ನು ಡಾ, ನೇತ್ರಾವತಿ ಏನ್ ಸಿರ್ಸಿಕರ್ (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು) ಇವರಿಗೆ ನೀಡಿ, ಡಾ, ಗಜಾನನ ಭಟ್ ಇವರಿಗೆ ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿ ಮಾಡಿದ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆದೇಶ ಹೋರಡಿಸಿದ್ದರು.

ಆದರೇ ಡಾ,ಗಜಾನನ ಭಟ್ ಅವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ, ಆದ್ದರಿಂದ ಈ ಕೂಡಲೇ ಇವರನ್ನು ಕರ್ತವ್ಯದಿಂದ ಅಮಾನತು ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಹಾಯಕ ಕಮಿಷನರ್ ಅವರ ಮೂಲಕ ಸರಕಾರಕ್ಕೆ ನೀಡಿದ ಮನವಿಯಲ್ಲಿ‌ ಒತ್ತಾಯಿಸಲಾಗಿದೆ.

ಈ ಸಂಧರ್ಭದಲ್ಲಿ ಮುಖಂಡರಾದ ಜಗದೀಶ್ ಗೌಡ, ಶ್ರೀನಿವಾಸ್ ನಾಯ್ಕ್, ಎನ್, ವಿ, ನಾಯ್ಕ್, ಪ್ರದೀಪ ಶೆಟ್ಟಿ, ಖಾದರ್ ಆನವಟ್ಟಿ, ಪ್ರಸನ್ನ ಶೆಟ್ಟಿ, ಶ್ರೀಧರ್ ನಾಯ್ಕ್, ಶೈಲೇಶ್ ಗಾಂಧಿ, ಗೀತಾ ಭೋವಿ, ಗೀತಾ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಾಜೇಶ್ ಮಡಿವಾಳ, ರಘು ಬ್ಯಾಗದ್ದೆ, ವಾಣಿ ಶಿರಾಲಿ, ಕಾರ್ಮೆಲಿನ್ ಫೆರ್ನಾಂಡಿಸ್, ನಜಿರ್ ಮೂಡಿ, ಪ್ರದೀಪ್ ಪವಾರ್, ಮುಜಿಬ್,ಪ್ರಸನ್ನ ನಾಯ್ಕ್,ಗಂಗಾಧರ್ ನಾಯ್ಕ್ ಬ್ಯಾಗದ್ದೆ, ದತ್ತಾತ್ರೇಯ ನಾಯ್ಕ್ ಬ್ಯಾಗದ್ದೆ ಸೇರಿ ಇನ್ನೂ ಅನೇಕರು ಹಾಜರಿದ್ದರು.

ಗಮನಿಸಿ