ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ‌ ಬರ್ಗಿಯಲ್ಲಿ ನೆಲೆಸಿರುವ ಶ್ರೀಮಹಾಲಿಂಗೇಶ್ವರ ದೇಗುಲದಲ್ಲಿಂದು ನವರಾತ್ರಿ ಪೂಜೆಯನ್ನ ವಿಶೇಷವಾಗಿ ನಡೆಸಲಾಯಿತು.

ನವರಾತ್ರಿಯ ದಿನದಲ್ಲಿ ಬರ್ಗಿ ಊರಿನ ಗ್ರಾಮಸ್ಥರು, ಮನೆತನದವರು, ವರ್ಗ(ಜಾತಿಯವರ) ಸೇರಿದಂತೆ ಹೀಗೆ ದಿನಕ್ಕೆ ಒಬ್ಬರಂತೆ ಪ್ರತಿವರ್ಷವೂ ನವರಾತ್ರಿಯಂದು ಪೂಜೆ ನಡೆಸಲಾಗುತ್ತಾ ಬರತ್ತಿದ್ದು,ಇವತ್ತು ರವಿವಾರ ನವರಾತ್ರಿಯ ನಾಲ್ಕನೆ ದಿನದ ಪೂಜೆಯನ್ನ ಅಂಗಡಿಗಾರರು ನಡೆಸಿಕೊಟ್ಟರು. ಹಾಗೆ ಇದೆ ಮೊದಲ ಬಾರಿಗೆ ನವರಾತ್ರಿ ಅಂಗವಾಗಿ ಸ್ಥಳೀಯ ಆಟೋ,ಲಗೇಜ್ ಚಾಲಕರು ಹಾಗೂ ಗ್ರಾಮಸ್ಥರು ಇಂದು ಅನ್ನದಾನ (ಪ್ರಸಾದ) ವಿತರಣೆ ನೆರವೇರಿಸಿದ್ದರು.

ಪೂಜಾ ಕಾರ್ಯಕ್ರಮದ ಅಂಗವಾಗಿ ಶ್ರೀಘಟಭೀರ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದಲ್ಲಿನ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದ್ದರು.

ಗಮನಿಸಿ