ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದ ವೀಣಾ ಆನಂದು ಗುನಗಿ ಅವರನ್ನು ಶುಕ್ರವಾರ ಗುನಗಿ ಸಮಾಜದ ಸಹಾಯವಾಣಿ ಸಂಘದ ಸದಸ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಗುನಗಿ ಸಮಾಜದ ಸಹಾಯವಾಣಿ ಸಂಘದ ಅಧ್ಯಕ್ಷರಾದ ಅರವಿಂದ ಗುನಗಿ ಅವರು, ಈಗಾಗಲೇ ನಮ್ಮ ಸಮಾಜ ಹಿಂದುಳಿದ ಸಮಾಜವಾಗಿದ್ದು, ಇದೀಗ ನಮ್ಮ ಸಮಾಜದ ಶಿಕ್ಷಕಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಪುರಸ್ಕರಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆ ವಿಷಯವಾಗಿದೆ.
ಇದೀಗ ನಾವು ನೂತನವಾಗಿ ಗುನಗಿ ಸಮಾಜದ ಸಹಾಯವಾಣಿ ಸಂಘ ರಚನೆ ಮಾಡಿ ನಮ್ಮ ಸಮಾಜದ ಜನರಿಗೆ ಯಾವುದೇ ಇಲಾಖೆಯಲ್ಲಿ ಕೆಲಸ ಆಗದೇ ಇದ್ದಲ್ಲಿ ಆತಂಹ ಕೆಲಸವನ್ನು ನಮ್ಮ ಗಮನಕ್ಕೆ ತಂದರೆ ಆ ಕೆಲಸ ಮಾಡಿಕೊಡಲು ಪ್ರಯತ್ನ ಮಾಡುತ್ತೇವೆ. ನಮ್ಮ ಸಮಾಜದ ಯುವಕರು ಮುಂದೆ ಬರಬೇಕು, ಎನ್ನುವದೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಇದಕ್ಕೆ ನಮ್ಮ ಸಮಾಜದ ಹಿರಿಯರು ಹಾಗೂ ಆತ್ಮೀಯರಾದ ಪ್ರಕಾಶ ಗುನಗಿ ಅವರು ಸಹ ನಮಗೆ ಬೆಂಬಲ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಈ ಸಂಘ ರಚನೆ ಮಾಡಿದ್ದೇವೆ ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಗುನಗಿ ಸಮಾಜದ ಹಿರಿಯರು ಆದ ಪ್ರಕಾಶ ಗುನಗಿ ಅವರು ಮಾತನಾಡಿ, ಇವತ್ತು ನಮ್ಮ ಸಮಾಜದ ಶಿಕ್ಷಕಿಯೋರ್ವರನ್ನು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿದಕ್ಕೆ ಸಮಾಜದ ವತಿಯಿಂದ ತಾವು ಬಂದು ಸನ್ಮಾನಿಸಿ ಗೌರವಿಸಿರುವುದು ಸಂತೋಷದ ವಿಷಯವಾಗಿದೆ. ಇದೇ ರೀತಿ ಎಲ್ಲಾ ಯುವಕರ ಆಸಕ್ತಿ, ಶ್ರಮದಿಂದಾಗಿ ಈ ಸಂಘವು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಬೆಳೆಯಲಿ. ಅದಕ್ಕೆ ನನ್ನ ಬೆಂಬಲ ಹಾಗೂ ಸಹಕಾರ ಸದಾ ಇದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿ ಅವರು ಗುನಗಿ ಸಮಾಜದ ವತಿಯಿಂದ ಸನ್ಮಾನಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ಇದೇ ರೀತಿ ಯುವಕರು ಮುಂದೆ ಬಂದು ನಮ್ಮ ಸಮಾಜ ಇನ್ನೂ ಎತ್ತಕ್ಕೆ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷರಾದ ಆನಂದು ಗುನಗಿ, ಕಾರ್ಯದರ್ಶಿ ಶ್ರೀಧರ ಗುನಗಿ, ಖಜಾಂಚಿ ಅರುಣ ಗುನಗಿ, ಸಹ ಕಾರ್ಯದರ್ಶಿ ರಾಘವೇಂದ್ರ ಗುನಗಿ, ಕಾರ್ಯಕಾರಿ ಸದಸ್ಯರಾದ ಅಕ್ಷಯ ನಾಯ್ಕ, ತುಳಸಿದಾಸ ಗುನಗಿ, ರೋಶನ ಗುನಗಿ, ನವೀನ ಗುನಗಿ, ಲೋಹಿತ ಗುನಗಿ, ಪ್ರಸಾದ ಗಾಡಿಗ, ಪ್ರಸಾದ ಗುನಗಿ, ಗಣೇಶ ಗುನಗಿ, ಪ್ರಜ್ಜಲ್ವ ಗುನಗಿ, ಗಿರಿಧರ ಗುನಗಿ ಸೇರಿದಂತೆ ಕಿನ್ನರ ಗ್ರಾಮ ಯುವಕರು ಇದ್ದರು.
ಗಮನಿಸಿ