Raichur:ರಾಯಚೂರು: ವಿದ್ಯಾರ್ಥಿನಿ (student) ಹೋಂವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಾಲೆಯ ( Privet school) ಶಿಕ್ಷಕಿಯೊಬ್ಬರು (teacher) ಮೈಯಲ್ಲಾ ಬಾಸುಂಡಿ ಬರುವಂತೆ ಹೊಡೆದಿದ್ದಾರೆ (beetan) ಎಂದು ಪಾಲಕರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಕೈಗೆ ಗಂಭೀರ ಗಾಯವಾಗಿದ್ದು, ಪೋಷಕರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ರಾಯಚೂರು ( Raichur) ಜಿಲ್ಲೆಯ ಲಿಂಗಸೂಗೂರು (Lingasuguru) ತಾಲೂಕಿನ ಹಟ್ಟಿ (hatti) ಪಟ್ಟಣದಲ್ಲಿನ ಶರಣಬಸವೇಶ್ವರ ಇಂಗ್ಲಿಷ್ ಮಾಧ್ಯಮ (English medium school) ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ ಎಂದು ಪಾಲಕರು ಆರೋಪಿಸಿದ್ದಾರೆ. 4ನೇ ತರಗತಿ ವಿದ್ಯಾರ್ಥಿನಿ ಶಿಕ್ಷಕಿಯಿಂದ ಥಳಿತಕ್ಕೆ ಒಳಗಾಗಿದ್ದಾಳೆ. ಶಿಕ್ಷಕಿ ವಿರುದ್ಧ ಕ್ರಮ (action) ಕೈಗೊಳ್ಳಬೇಕು ಎಂದು ಪಾಲಕರು (parents) ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಯ ಪಾಲಕರು ಹಾಗೂ ಸ್ಥಳೀಯರು ಶಿಕ್ಷಣ ಸಂಸ್ಥೆ ವಿರುದ್ಧ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ ಶಿಕ್ಷಕಿ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಎಸ್ಎಫ್ಐ ಪದಾಧಿಕಾರಿ ರಮೇಶ ವೀರಾಪುರ ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಮಾಡಿದರೆ ಬಿಇಓ ಕಚೇರಿ ಎದುರು ಪ್ರತಿಭಟನೆ ಪ್ರತಿಭಟನೆ ಮಾಡುವುದಾಗಿ ಎಸ್ಎಫ್ಐ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ