suddibindu.in
ಮೈಸೂರು
: ಮೂಡಾ ಹಗರಣ ವಿಚಾರ ಎದುರಿಸುತ್ತಿರುವ ಸಿ ಎಂ ಸಿದ್ದರಾಮಯ್ಯ ಅವರನ್ನ ಬದಲಾವಣೆ ಮಾಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ನಾನು ಸಿ ಎಂ ಆಗೋದಕ್ಕೆ ಸಿದ್ದ ಎಂದು ಮೊನ್ನೆಯಷ್ಟೆ ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆ ಅವರು ಸಿ ಎಂ ತವರು ಮೈಸೂರಲ್ಲೇ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಪಕ್ಷದಲ್ಲಿ ಸಾಕಷ್ಟು ಚರ್ಚೆಗಳು ಉಂಟಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ ಎಂ ಸಿದ್ದರಾಮಯ್ಯ, ಸಿ ಎಂ ಖುರ್ಚು ಬದಲಾವಣೆ ಮಾಡೋದು ಯಾರಿಗೆ ಮಾಡಬೇಕು ಅನ್ನೋದು ಎಲ್ಲವೂ ಹೈ ಕಮಾಂಡ ಮಾಡತ್ತೆ. ಅದು ನನ್ನ ಕೈಯಲ್ಲಿ ಇಲ್ಲ ಎನ್ನುವ ಮೂಲಕ ಸಿ ಎಂ ಸಿದ್ದರಾಮಯ್ಯ ದೇಶಪಾಂಡೆ ಅವರಿಗೆ ಟಾಂಗ್ ಕೊಟ್ಟಿರೋ ಹಾಗಿದೆ.ಈ ಹೇಳಿಕೆ ನೀಡುವ ಮೂಲಕ ಸಿ ಎಂ ಖುರ್ಚಿ ಖಾಲಿ ಇಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ