suddibindu.in
ಕಾರವಾರ: ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಯಾದರೆ ಖುಷಿಪಡುವ ಮೊದಲಿಗ ನಾ‌ನು , ಆದರೆ …..ಪಕ್ಷದ ಹೈಕಮಾಂಡ್ ನಿಂದ ಹಿಡಿದು ಸಾಮನ್ಯ ಕಾರ್ಯಕರ್ತರ ಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ. ದೇಶಪಾಂಡೆ ಅವರು ಸಿದ್ದರಾಮಯ್ಯ ಅವರ ಸ್ನೇಹಿತರು. ಹಿರಿಯರು. ಅವರಿಗೆ ಸಿದ್ದರಾಮಯ್ಯ ಹೇಳಿರಬೇಕು ಎಂದು ನಗುತ್ತಾ ಸಚಿವ ಮಂಕಾಳು ವೈದ್ಯ ಹೇಳಿದರು.

ಅವರ ಮಾತಿನ ದಾಟಿಯಲ್ಲಿ ಏ‌ನು ಅಡಗಿದೆ ಎಂಬುದು ಸ್ಪಷ್ಟವಾಗಲಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು, ನಾಳೆ ಹಾಗೂ ಮುಂದೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆಂದು ಸಚಿವ ವೈದ್ಯ ಹೇಳಿದರು.‌

ಕಾರವಾರದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉದ್ಘಾಟನಾ ಸಮಾರಂಭಕ್ಕೆ ಸೋಮವಾರ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದರು. ದೇಶಪಾಂಡೆ ಹಿರಿಯರು. ನನ್ನ ಜಿಲ್ಲೆಯವರು. ಅವರು ಸಿಎಂ ಆದರೆ ನನಗೆ ಸಂತೋಷ. ಏನೋ ಆಸೆ ವ್ಯಕ್ತಪಡಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರಿಗೂ ದೇಶಪಾಂಡೆ ಮುಖ್ಯಮಂತ್ರಿ ಆದರೆ ಸಂತೋಷ ಪಡುವವರಲ್ಲಿ ಎರಡನೇ ಅವರು. ಆದರೆ ಪಕ್ಷ, ಹೈಕಮಾಂಡ್, ಇಡೀ‌ ದೇಶದ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಇದ್ದಾರೆ ಎಂದರು.

ಇದನ್ನೂ ಓದಿ