suddibindu.in
ಕಾರವಾರ : ರಾತ್ರಿವೇಳೆ ಚಿರತೆಯೊಂದು ನಾಯಿಯನ್ನ ಬೇಟೆಯಾಡಲು ಹೋಗಿ ಬಾವಿಯಲ್ಲಿ ಬಿದ್ದು, ಚಿರತೆಯೊಂದು ತನ್ನ ಜೀವ ಕಳೆದುಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಗೋಪಶಿಟ್ಟಾ ವಲಯ ಅರಣ್ಯ ವ್ಯಾಪ್ತಿಯ ಜರಡಿ ಗ್ರಾಮದಲ್ಲಿ ಘಟನೆ

ಚಿರತೆಯೊಂದು ನಾಯಿಯನ್ನ ಬೇಟೆಯಾಡಲು ಅಟ್ಟಿಸಿಕೊಂಡು ಬಂದಿದೆ. ರಾತ್ರಿ ಸಮಯವಾಗಿದ್ದು, ಹೀಗಾಗಿ ಆ ಚಿರತೆಗೆ ಬಾವಿ ಕಾಣದೆ ರಮೇಶ್ ಗೋವೇಕರ್ ಎಂಬುವವರ ತೆರದ ಬಾವಿಗೆ ಬಿದ್ದಿದೆ.ಬಾವಿಯಿಂದ ಮೇಲೆ ಬರಲು ಚಿರತೆ ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ ಅದು ಸಾಧ್ಯವಾಗಿಲ್ಲ. ಸ್ಥಳೀಯರು ಬೆಳ್ಳಿಗೆ ನೀರಿಗಾಗಿ ಬಾವಿಗೆ ಹೋಗಿದ್ದ ವೇಳೆ ಚಿರತೆ ಬಿದ್ದಿರುವುದು ಕಂಡಿದೆ.

ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ ಅಧಿಕಾರಿಗಳು ಬಾವಿಯಲ್ಲಿ ಬಿದ್ದಿರುವ ಚಿರತೆಯನ್ನ ಪರಿಶೀಲನೆ ನಡೆಸಿದ್ದು, ಈ ವೇಳೆ ಚಿರತೆ ಸಾವನ್ನಪ್ಪಿರುವುದು ಗೊತ್ತಾಗಿದೆ.ಮೃತ ಚಿರತೆಯ ಮೃತದೇಹವನ್ನ ಮೇಲಕ್ಕೆತ್ತಿದ್ದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ