suddibindu.in
ಕಾರವಾರ: ರಾಜು ತಾಂಡೇಲ ಅವರ ಸಾವಿನ ಬಗ್ಗೆ ಸುಳ್ಳಿನ ಲೇಪ ಹಚ್ಚಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಾಸಕ ಸತೀಶ್ ಸೈಲ್ ಬೇಸರ ವ್ಯಕ್ತಪಡಿಸಿದರು‌.

ನಗರದ ಅಜ್ವಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ನುಡಿನಮನ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜು ತಾಂಡೇಲ ಅವರ ಬಗ್ಗೆ ಹಲವರು ಅನಿಸಿಕೆ ಹೇಳಿದರು. ಅವರು ಕೊನೆಯ ವೇಳೆ ಅನುಭವಿಸಿದ ನೋವು ನಾನು ನೋಡಿದ್ದೇನೆ. ಆದರೂ ಸಾವಿನ ಬಗ್ಗೆ ಸುಳ್ಳಿನ ಲೇಪ ಹಚ್ಚಲು ಹೊರಟಿದ್ದಾರೆ ಎಂದರು.

ನನ್ನನ್ನೇ ಟಾರ್ಗೆಟ್ ಮಾಡುವ ವಿಚಾರ ಮಾಡಿದ್ದಾರೆ. ಆದರೆ ರಾಜು ಆತ್ಮಕ್ಕೆ ಗೊತ್ತಿದೆ. ನಾನು ಅವರಿಗಾಗಿ ಏನು ಮಾಡಿದ್ದೇನೆ ಎಂದು. ರಾಜು ಮೃತಪಟ್ಟ ದಿನ ಅವರು ಕಾಣಕೋನಕ್ಕೆ ಬರುವ ವಿಚಾರವೇ ನನಗೆ ಗೊತ್ತಿರಲಿಲ್ಲ‌.

ಹಲವು ಮೀನುಗಾರ ಮುಖಂಡರು ಇದ್ದರು.‌ ರಾಜು ಅಂದು ಬಂದ ವೇಳೆ ಹೇಳಿದ್ದರು ಸತೀಶ್ ನನ್ನ ರಾಜಕಾರಣ ನಿನ್ನ ಸಲುವಾಗಿ ಎಂದು.ಎಲ್ಲರೂ ಇದಕ್ಕೆ ಸಾಕ್ಷಿ ಸಹ ಇದ್ದಾರೆ. ರಾಜು ತಾಂಡೇಲ್ ನನ್ನ ಗೆಲುವಿಗಾಗಿ ಓಡಾಡಿದ್ದಾರೆ.ಗೆದ್ದ ತಕ್ಷಣ ಅವರ ಬೆನ್ನಿಗೆ ನಾನು ಇದ್ದೆ. ನನ್ನ ಬಳಿ ಬಂದ ವೇಳೆಯಲ್ಲಿ ಶಿಕ್ಷಣ,ನೌಕರಿ, ಆರೋಗ್ಯ ಇಂತಹ ವಿಷಯದಲ್ಲಿ ಜನರನ್ನ ಕರೆದುಕೊಂಡು ಬರುತ್ತಿದ್ದರು. ಎಷ್ಟೋ ಕೆಲಸ ನಾನು ಮಾಡಿಕೊಟ್ಟಿದ್ದು ಅದನ್ನು ನೆನಪಿಸುತ್ತೇನೆ ಎಂದರು.

ಇನ್ನೂ ರಾಜು ಅವರು ಚಿತ್ತಾಕುಲ ಗ್ರಾಮ ಪಂಚಾಯತ ಅಧ್ಯಕ್ಷರಾಗುವಾಗ ಹಾಗೇನೆ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗುವಾಗಲು ಸಹ ನಾನು ರಾಜು ಅವರ ಬೆಂಬಲಕ್ಕೆ ನಿಂತುಕೊಂಡವನು, ಅದು ರಾಜು ಅವರ ಆತ್ಮಕ್ಕೆ ಗೊತ್ತಿದ್ದರೆ ಸಾಕು. ನಾನು ಏನು ಮಾಡಿದ್ದೇನೆ ಎನ್ನುವುದು ರಾಜು ಆತ್ಮಿಯರು ಗೋತ್ತು.ಆದರೆ ನಾನು ಅದನ್ನು ಯಾವತ್ತು ಪ್ರಚಾರಕ್ಕೆ ಬಳಸಿಕೊಂಡಿಲ್ಲ.‌ ಅದು ನನಗೆ ಬೇಕಾಗಿಯೂ ಇಲ್ಲ

ರೂಪಾಲಿ ನಾಯ್ಕ ಮೊದಲ ಬಾರಿಗೆ ಶಾಸಕರಾದಾಗ ಬೈತ್ಕೋಲದಲ್ಲಿ ಯಾರೋ ಅಡ್ಡ ಹಾಕಲು ಬಂದಿದ್ದಾರೆ ಎಂದು ನನಗೆ ಫೋನ್ ಮಾಡಿದಾಗ ಸಹೋದರಿ ನಾನು‌ ನಿನ್ನ ಜೊತೆ ಇದ್ದೇನೆ ಹೆದರಬೇಡ ಎಂದಿದ್ದೆ. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.ಆನಂದ್ ಅಸ್ನೋಟಿಕರ್ ನನ್ನ ಬಗ್ಗೆ ಮಾತನಾಡಿದ್ದಾರೆ. ರಾಜು ನನಗಿಂತ ಮುಂಚೆ ಆನಂದ್ ಜೊತೆ ಇದ್ದರು. ಆದರೆ ಅವರ ಮೇಲೆ‌ ಕೇಸ್ ಹಾಕಿ ತೊಂದರೆ ಕೊಟ್ಟಿದ್ದು ಯಾರು. ಈ ಬಗ್ಗೆ ಆನಂದ್ ಗೆ ಸಮೀರ್ ನಾಯ್ಕ ಸಹ ಪ್ರಶ್ನಿಸಿದ್ದಾರೆ.

ನಾನು ನಿನ್ನೆ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. 136 ಶಾಸಕರು ಎಲ್ಲರೂ ರಾಜಭವನಕ್ಕೆ ಮನವಿ ಕೊಡಲು ಬರಬೇಕು ಎಂದು ಹೇಳಿದ್ದರು. 136 ಜನರಲ್ಲಿ 6 ಜನ ಮಾತ್ರ ಬಂದಿರಲಿಲ್ಲ. ನಾನು ನಿಗಮದ ಅಧ್ಯಕ್ಷ ಇದ್ದು ಸಿಎಂ ಪರ ಮನವಿ ಕೊಡುವ ವೇಳೆ ಹಾಜರಿರಲೇ ಬೇಕಾಗಿರುತ್ತದೆ.ಆದರೆ ಇದನ್ನ ಅರಿಯದೇ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜು ತಾಂಡೇಲ್ ನನ್ನ ಕೈನಲ್ಲಿ ಇರುವಾಗಲೇ ಸಾವನ್ನಪ್ಪಿದ್ದಾರೆ. ಅವರಿಗೆ ಹೃದಯಾಘಾತ ಆದಾಗ ತಕ್ಷಣ ವೈದ್ಯರಿಗೆ ತಿಳಿಸಿ ಕಾರಿನಲ್ಲಿ ಬಂದಿದ್ದೆವು. ಅವರ ಸಾವಿನಲ್ಲಿ ನಾನು ಇದ್ದೇನೆ ಎಂದು ಹೇಳುವವರು ಮನುಷ್ಯರಲ್ಲ ಹೇಡಿಗಳು. ಅಂತವರು ಬದುಕಬಾರದು. ಅರಿತು ಮಾತನಾಡುವುನ್ನ ಕಲಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು‌.

ಕೆಲವರು ಬೆಳಿಗ್ಗೆ ಒಂದು ಸಂಹೆ ಒಂದು ರೀತಿ ವರ್ತಿಸುತ್ತಾರೆ. ಬೆಳಿಗ್ಗೆ ನನ್ನ ಕಚೇರಿಗೆ ಬಂದು ಸಂಜೆ ಬುರ್ಕಾ ಹಾಕಿ ಇನ್ನೊಬ್ಬರ ಆಫೀಸ್ ಗೆ ಹೋಗುತ್ತಾರೆ. ನಾನು ಸಣ್ಣ ರಾಜಕಾರಣ ಮಾಡುವುದಿಲ್ಲ.‌ ಬೇಕಾದರೆ ರಾಜಕೀಯವೇ ಬಿಡುತ್ತೇನೆ.

ಒಳ್ಳೆಯವರನ್ನ ದೇವರು ಬೇಗ ಕರೆಯುತ್ತಾರೆ ಎನ್ನುತ್ತಾರೆ. ಅದರಂತೆ ರಾಜು ತಾಂಡೇಲ್ ನನ್ನಿಂದ ದೂರವಾಗಿದ್ದಾರೆ. ಅವರ ಕುಟುಂಬದ ಜೊತೆ ಸದಾ ಕಾಲ ನಾವು ನಿಂತಿರುತ್ತೇವೆ ಎಂದರು.