suddibindu.in
Karwar:ಕಾರವಾರ : ಗಾಂಜಾ ಮಾರಾಟ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಕಾರವಾರ ಜಿಲ್ಲಾ ಕಾರಾಗ್ರಹದಲ್ಲಿದ್ದ ಆರೋಪಿಗಳಿಬ್ಬರೂ ಸ್ವಯಂ ಹಲ್ಲೆ ಮಾಡಿಕೊಂಡು ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಮಹಮ್ಮದ್ ಮಜಾಮಿನ್ ಹಾಗೂ ಫರಾನ್ ಛಬ್ಬಿ ಎಂಬುವವರೆ ಹಲ್ಲೆ ಮಾಡಿಕೊಂಡವರಾಗಿದ್ದಾರೆ.ಇವರು ಕಳೆದ ಕೆಲ ದಿನಗಳ ಹಿಂದಷ್ಟೆ ದಾಂಡೇಲಿ ಹಾಗೂ ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಗಳಾದ ಮಹಮ್ಮದ್ ಮುಜಾಮಿಲ್, ಫರಾನ್ ಛಬ್ಬಿ ಅವರನ್ನ ಗಾಂಜಾ ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಕಾರವಾರ ಜೈಲಿನಲ್ಲಿ ಇಡಲಾಗಿತ್ತು. ಇವರು ಮೊದಲಿನಿಂದಲ್ಲೂ ಗಾಂಜಾ ವ್ಯಸನಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಹೀಗಾಗಿ ಬಂಧನದ ಬಳಿಕ ಗಾಂಜಾ ಸಿಗದೆ ಚಟಪಟಿಸುತ್ತಿದ್ದು ಇವರು ಇಂದು ಮಧ್ಯಾಹ್ನ ಊಟ ಬಂದಾಗಲು ಊಟ ತೆಗೆದುಕೊಳ್ಳದೆ ಜೈಲ್ ಒಳಗೆ ಕೂಗಾಡಿಕೊಂಡಿದ್ದಾರೆನ್ನಲಾಗಿದ್ದು, ತಂಬಾಕು ತಂದುಕೊಂಡುವಂತೆ ವಾರ್ಡನ್, ಬಳಿ ಕೇಳಿಕೊಂಡಿದ್ದಾರೆ. ಇದಕ್ಕೆ ವಾರ್ಡನ್ ನಿರಾಕರಿಸಿದ್ದಾರೆ.ನಂತರದಲ್ಲಿ ಓರ್ವ ಆರೋಪಿ ಕಲ್ಲಿನಿಂದ ತಲೆಗೆ ಚಚ್ಚಿಕೊಂಡರೆ ಇನ್ನೊರ್ವ ಜೈಲು ಕಂಬಿಗೆ ಚಚ್ಚಿಕೊಂಡಿಕೊಂಡಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಇಬ್ಬರನ್ನ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಯಲ್ಲಿ ಮಾಧ್ಯಮದವರ ಎದುರು ಆರೋಪಿಗಳು ತಮ್ಮ ಮೇಲೆ ವಾರ್ಡನ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಗಾಯಗೊಂಡ ಇಬ್ಬರಿಗೂ ಕ್ರಿಮ್ಸ್ಗೆ ಕರೆದೊಯ್ಯದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ