suddibindu.in
Gokarna:ಗೋಕರ್ಣ: ಗೋಕರ್ಣದ ಸಾರ್ವಭೌಮ ಗುರುಕುಲಮ್ ಇವರ ಆಶ್ರಯದಲ್ಲಿ ಶ್ರೀಭಧ್ರಕಾಳಿ ಪ್ರೌಢಶಾಲೆಯ ಸುಧಾ ನಾರಾಯಣ್ ಪೈ ಸ್ಮಾರಕ ಕ್ರೀಡಾಂಗಣದಲ್ಲಿ ನಡೆದ 2024 25 ನೇ ಸಾಲಿನ ಗೋಕರ್ಣ ಕೇಂದ್ರ ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಮಾಡೆರ್ನ ಎಜ್ಯುಕೇಶನ್ ಶಾಲೆಯ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ ಮಾಡಿರುತ್ತಾರೆ.
ಕುಮಾರ ಸಾಜನ್ ನಾಗರಾಜ್ ನಾಯ್ಕ್ ಈತನು 100 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ, ಚಿನ್ಮಯ್ ಅಶೋಕ ಗೌಡ 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ವಿಘ್ನೇಶ್ ವೆಂಕಣ್ಣ ಗೌಡ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಪ್ರಸಾದ್ ಗೌಡ 600 ಮೀಟರ್ ಓಟದಲ್ಲಿ ಪ್ರಥಮ, ನವೀನ್ ಕುಮಾರ್ ಗೌಡ ಗುಂಡು ಎಸೆತ ದಲ್ಲಿ ದ್ವಿತೀಯ ಸ್ಥಾನ, ಗೌತಮಿ ಮೋರ್ಜೆ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಚಿತ್ರ ನಾಯ್ಕ್ ಚಕ್ರ ಎಸೆತದಲ್ಲಿ ತ್ರೃತೀಯ ಸ್ಥಾನ, ಶ್ರೀನಿಧಿ ಎಸ್ ಬಟಕುರ್ಕಿ ಚೆಸ್ ನಲ್ಲಿ ಪ್ರಥಮ ಸ್ಥಾನ, ಗುಂಪು ಆಟದ ವಿಭಾಗದಲ್ಲಿ ಬಾಲಕರ ರಿಲೇಯಲ್ಲಿ ಪ್ರಥಮ ಸ್ಥಾನ, ಬಾಲಕರ ಕಬಡ್ಡಿ ಬಾಲಕರ ವಾಲಿಬಾಲ್ ಹಾಗೂ ಬಾಲಕರ ಥ್ರೋಬಾಲ್ ನಲ್ಲಿ ಪ್ರಥಮ ಸ್ಥಾನ ಬಾಲಕಿಯರ ಕಬ್ಬಡಿಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ
- ಇಂದು ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ರಜೆ
- ಅನಂತಕುಮಾರ ಹೆಗಡೆ ಬೆಂಬಲಿಗರಿಂದ ಹೆದ್ದಾರಿಯಲ್ಲೆ ಹಲ್ಲೆ
- ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ
ಈ ಎಲ್ಲಾ ಬಹುಮಾನಗಳೊಂದಿಗೆ ಗೋಕರ್ಣ ಕೇಂದ್ರದಲ್ಲಿ ಸಮಗ್ರ ವೀರಾಗ್ರಣಿ , ಪ್ರಶಸ್ತಿಯನ್ನು ಪಡೆದಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ನಿತ್ಯಾನಂದ ಗೌಡ ಇವರನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ನಾಯಕ ತೊರ್ಕೆ ಉಪಾಧ್ಯಕ್ಷರಾದ ನಾಗೇಂದ್ರ ಶೆಟ್ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾಕ್ಟರ್ ಎಂ ಡಿ ನಾಯ್ಕ್ ಮುಖ್ಯೋಪಾಧ್ಯಾಪಕರಾದ ರಾಜೇಶ್ ಗೊನ್ಸಲ್ವಿಸ್ ಹಾಗೂ ಶಿಕ್ಷಕರಂದದವರು ಅಭಿನಂದಿಸಿದ್ದಾರೆ,
ಗೋಕರ್ಣದ ದಂತಹ ಗ್ರಾಮೀಣ ಪ್ರದೇಶದಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಯಲ್ಲಿ ಸದಾ ಮೂಂಚೂಣಿಯಲ್ಲಿರುವ ಒಂದು ಅದ್ಭುತ ಸಂಸ್ಥೆ ಎಂದು ಊರ ನಾಗರಿಕರೂ ಕೂಡ ಅಭಿನಂದಿಸಿರುತ್ತಾರೆ