suddibindu.in
Karwar : ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ನಾಪತ್ತೆಯಾಗಿರುವ ಲಾರಿ ಮಣ್ಣಿನ ಅಡಿಯಲ್ಲಿ ಇರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಖಚಿತ ಪಡಿಸಿದ್ದಾರೆ.
ಲಾರಿ ಮಣ್ಣಿನಲ್ಲಿ ಹೂತು ಹೋದ ಜಾಗ ಮೆಟಲ್ ಡಿಟೆಕ್ಟರ್ ಮೂಲಕ ಪತ್ತೆಯಾಗಿದೆ. ನಾಳೆ ದೇಹಲಿಯಿಂದ ಇನ್ನೊಂದು ಖಾಸಗಿ ಸಂಸ್ಥೆಯವರು ಆಗಮಿಸಲಿದ್ದಾರೆ.ಲಾರಿ ಇರುವ ಜಾಗ ಖಚಿತವಾಗಲಿದೆ. ಇಂದಿನ ಕಾರ್ಯಚರಣೆಯಲ್ಲಿ ನಾಲ್ಕು ಭಾಗದಲ್ಲಿ ಕಬ್ಬಿಣದ ಭಾಗಗಳು ಇವೆ ಎನ್ನುವ ಬಗ್ಗೆ ಖಾತ್ರಿಯಾಗಿದೆ.ಡಿಟೆಕ್ಟ್ ಆದ ಜಾಗದಲ್ಲಿ ನಾಳೆ ಇನ್ನಷ್ಟು ತ್ವರಿತವಾಗಿ ಕಾರ್ಯಾಚರಣೆ ನಡೆಯಲಿದೆ.ನಾಳೆ ದೇಹಲಿಯಿಂದ ಬಂದ ತಂಡ ಕೂಡಾ ಖಚಿತ ಪಡಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ಇನ್ನೂ ನಾಳೆ ಕದಂಬ ನೌಕಾಪಡೆಯಿಂದಲ್ಲೂ ಕಾರ್ಯಚರಣೆ ನಡೆಸುವ ಸಾಧ್ಯತೆ ಇದ್ದು, ಕಾರ್ಯಚರಣೆ ಸ್ಥಳಕ್ಕೆ ಹೋಗದಂತೆ ಮಾಧ್ಯಮದವರು ಸೇರಿದಂತೆ ಎಲ್ಲರಿಗೂ ನಿರ್ಬಂಧ ಹಾಕಲಾಗಿದೆ.







