suddibindu.in
Karwar : ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ನಾಪತ್ತೆಯಾಗಿರುವ ಲಾರಿ ಮಣ್ಣಿನ ಅಡಿಯಲ್ಲಿ ಇರುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಅವರು ಖಚಿತ ಪಡಿಸಿದ್ದಾರೆ.
ಲಾರಿ ಮಣ್ಣಿನಲ್ಲಿ ಹೂತು ಹೋದ ಜಾಗ ಮೆಟಲ್ ಡಿಟೆಕ್ಟರ್ ಮೂಲಕ ಪತ್ತೆಯಾಗಿದೆ. ನಾಳೆ ದೇಹಲಿಯಿಂದ ಇನ್ನೊಂದು ಖಾಸಗಿ ಸಂಸ್ಥೆಯವರು ಆಗಮಿಸಲಿದ್ದಾರೆ.ಲಾರಿ ಇರುವ ಜಾಗ ಖಚಿತವಾಗಲಿದೆ. ಇಂದಿನ ಕಾರ್ಯಚರಣೆಯಲ್ಲಿ ನಾಲ್ಕು ಭಾಗದಲ್ಲಿ ಕಬ್ಬಿಣದ ಭಾಗಗಳು ಇವೆ ಎನ್ನುವ ಬಗ್ಗೆ ಖಾತ್ರಿಯಾಗಿದೆ.ಡಿಟೆಕ್ಟ್ ಆದ ಜಾಗದಲ್ಲಿ ನಾಳೆ ಇನ್ನಷ್ಟು ತ್ವರಿತವಾಗಿ ಕಾರ್ಯಾಚರಣೆ ನಡೆಯಲಿದೆ.ನಾಳೆ ದೇಹಲಿಯಿಂದ ಬಂದ ತಂಡ ಕೂಡಾ ಖಚಿತ ಪಡಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ
- ಸಿದ್ದಾಪುರ-ಬನವಾಸಿ, ಸಾಗರಕ್ಕೆ ಸೇರಿಸಲು ಬಿಡುವುದಿಲ್ಲ : ಅನಂತಮೂರ್ತಿ ಹೆಗಡೆ
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
ಇನ್ನೂ ನಾಳೆ ಕದಂಬ ನೌಕಾಪಡೆಯಿಂದಲ್ಲೂ ಕಾರ್ಯಚರಣೆ ನಡೆಸುವ ಸಾಧ್ಯತೆ ಇದ್ದು, ಕಾರ್ಯಚರಣೆ ಸ್ಥಳಕ್ಕೆ ಹೋಗದಂತೆ ಮಾಧ್ಯಮದವರು ಸೇರಿದಂತೆ ಎಲ್ಲರಿಗೂ ನಿರ್ಬಂಧ ಹಾಕಲಾಗಿದೆ.