suddibindu.in
ಕಾರವಾರ: ದಯವಿಟ್ಟು 650 ಕೋಟಿ ವೆಚ್ಚದ ಯೋಜನೆಯನ್ನ ಕೈ ಬಿಡಿ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಕಾರವಾರ ಡಿ.ಸಿ.ಎಫ್ ರವಿಶಂಕರ್ ಅವರಿಗೆ ಮನವಿ ಮಾಡಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಾಯಿತು.ಈ ಸಂಧರ್ಭದಲ್ಲಿ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರಂತೆ ತಡೆಯುವ ಸುಮಾರು 650 ಕೋಟಿ ವೆಚ್ಚದ ಯೋಜನೆ ಬಗ್ಗೆ ಚರ್ಚೆ ಆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ದಯವಿಟ್ಟು ಈ ಯೋಜನೆ ಜಾರಿಗೆ ತರಬೇಡಿ. ನಾನು ಬೇರೆ ಏನು ಹೇಳುವುದಿಲ್ಲ. ಯೋಜನೆ ಕೈ ಬಿಡುವುದು ಒಳ್ಳೆಯದು ಎಂದು ಡಿ.ಸಿ.ಎಫ್ ಗೆ ಮನವಿ ಮಾಡಿಕೊಂಡರು.
ಇದನ್ನೂ ಓದಿ
- ಸುದ್ದಿಬಿಂದು ನ್ಯೂಸ್ ಇಂಪ್ಯಾಕ್ಟ್: X ಖಾತೆಯಲ್ಲಿ ಗೋಪಾಲಕೃಷ್ಣ ನಾಯಕ್ ಹಲ್ಲೆ ಖಂಡಿಸಿದ ಆರ್.ವಿ. ದೇಶಪಾಂಡೆ
- ಆರೋಗ್ಯ ವಿಮೆ ತೆಗೆದುಕೊಳ್ಳದಿದ್ದರೆ ಲಕ್ಷಾಂತರ ಖರ್ಚು: ಸರಿಯಾದ Health Insurance ಆಯ್ಕೆ ಹೇಗೆ?
- IPL /ವಾಂಖೆಡೆ ಮೈದಾನದಲ್ಲಿಂದು : Mumbai-ಕೊಲ್ಕತ್ತಾ ನಡುವೆ ಹೈವೋಲ್ಟೇಜ್ ಮ್ಯಾಚ್
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ತಮ್ಮ ಇಲಾಖೆಯಲ್ಲಿ ಪ್ಲಾಸ್ಟಿಕ್ ತಡೆಯಲು ಕೈ ಗೊಂಡ ಯೋಜನೆ ಬಗ್ಗೆ ದಿನಕರ ಶೆಟ್ಟಿ ವಿರೋಧಕ್ಕೆ ಇಳಿದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.




