suddibindu.in
ಕುಮಟಾ : ಪ್ರವಾಸೋದ್ಯಮದ ಮೂಲಕ ಪ್ರಪಂಚದ ಪ್ರವಾಸಿಗರನ್ನ ಸೆಳೆಯುತ್ತಿರುವ ಗೋಕರ್ಣಕ್ಕೆ ನಿತ್ಯವೂ ಸಾವಿರಾರೂ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರ ಹಾಗೂ ಸಾರ್ವಜನಿಕರ ಓಡಾಟಕ್ಕಾಗಿ ಅನುಕೂಲವಾಗಲೆಂದು ಕೆಲ ತಿಂಗಳ ಹಿಂದೆ ನಿರ್ಮಿಸಿದ ರಸ್ತೆಯ ಕಾಂಕ್ರೀಟ್ ಕಿತ್ತು ನಿರ್ನಾಮವಾಗಿದೆ. ಓಡಾಡುವುದಕ್ಕೂ ಅಪಾಯ ಎದುರಾಗಿದೆ.
ಗೋಕರ್ಣದ ಭದ್ರಕಾಳಿ ಕಾಲೇಜಿನ ಬಳಿ 2023ರಲ್ಲಿ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆ ನಿರ್ಮಾಣ ಮಾಡಲಾಗಿದೆ.ಮಳೆಗಾಲದ ಕೆಲವೇ ತಿಂಗಳು ಹಿಂದೆ ನಿರ್ಮಾಣ ಮಾಡಿದ ಕೋಟಿ ಕೋಟಿ ಹಣದ ಕಾಮಗಾರಿ ಮುಂಗಾರು ಮಳೆಯ ಮೊದಲ ಹನಿಯಲ್ಲೆ ಕೊಚ್ಚಿಕೊಂಡು ಕಡಲತೀರಕ್ಕೆ ಸೇರಿಕೊಂಡಿದೆ.
ಇದನ್ನೂ ಓದಿ
- ಮನೆಯಲ್ಲಿದ್ದ ಲಕ್ಷಾಂತರ ಬೆಲೆಯ ಚಿನ್ನಾಭರಣ ಕದ್ದ ಕಳ್ಳರು
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
ಮಳೆ ಆರಂಭದಲ್ಲೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಇಲಾಖೆಯ ಅಧಿಕಾರಿಗಳು ಇದುವರೆಗೆ ಕಣ್ಣು ಹಾಯಿಸಿಲ್ಲ. ಗುಡ್ಡದಿಂದ ಬಂದ ಮಳೆ ನೀರು ರಸ್ತೆಯನ್ನು ಹಾಳು ಮಾಡಿದೆ. `ಖಾಸಗಿ ಜಾಗದವರು ಏಕಾಏಕಿ ನೀರು ಬಿಟ್ಟಿದ್ದರಿಂದ ರಸ್ತೆ ಹಾಳಾಗಿದೆ. ಮಣ್ಣು ಕುಸಿಯದಂತೆ ತಡೆಗೋಡೆ ಹಾಗೂ ಚರಂಡಿ ನಿರ್ಮಿಸಿ ಇದನ್ನು ಸರಿಪಡಿಸುತ್ತೇವೆ’ ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಅಪಾಯದ ಅಂಚಿನಲ್ಲಿರುವ ಈ ರಸ್ತೆಯ ಮೂಲಕ ಓಂ ಕಡಲತೀರಕ್ಕೆ ಹೋಗಬಹುದಾಗಿದ್ದು, ರಸ್ತೆ ಕುಸಿದ ಬಗ್ಗೆ ನಾಮಫಲಕ ಅಳವಡಿಸಿದಲ್ಲಿ ಜನದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ರಸ್ತೆ ಕುಸಿದ ನಾಮಫಲಕ ಅಳವಡಿಸಬೇಕು’ ಎಂಬುದು ಸಾರ್ವಜನಿಕರ ಅಭಿಪ್ರಾಯ.