suddibindu.in
ಅಂಕೋಲಾ: ಅಗ್ನಿಶಾಮಕ (Firemen) ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿಶಾಮಕದ ರಕ್ಷಣಾ ಕಾರ್ಯ ಹಾಗೂ ಇನ್ನಿತರ ವಿಪತ್ತು ಸಂದರ್ಭದಲ್ಲಿ ಅಸಾಧಾರಣ ಸೇವೆ ಸಲ್ಲಸಿ 2024ನೇ ಸಾಲಿನ ಮುಖ್ಯಮಂತ್ರಿಗಳ (CM) ಚಿನ್ನದ ಪದಕ ( Gold Medal f)ಗಳಿಸಿದ ಕನ್ನೆ ವಿಠೋಬ ಗೌಡ ಅಂಕೋಲಾ ಬೆಳಸೆ ಗ್ರಾಮದವರಾಗಿದ್ದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದನ್ನೂ ಓದಿ
- ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ: ಮೂವರು ಗಂಭೀರ
- ಆರೋಪದಿಂದ ಕ್ಷಮೆಯಾಚನೆವರೆಗೆ: ಶರಾವತಿ ಯೋಜನೆ ವಿಚಾರದಲ್ಲಿ ಸುನೀಲ ನಾಯ್ಕ ಯು-ಟರ್ನ್
- ಸಮಾಜಸೇವಕನ ಮಾದರಿ ಹೆಜ್ಜೆ : ಎಸ್ಎಸ್ಎಲ್ಸಿ ಟಾಪರ್ಗಳಿಗೆ ಶೈಕ್ಷಣಿಕ ನೆರವು ಘೋಷಣೆ
ಇವರು ಉತ್ತರ ಕನ್ನಡ(uttara Kannada)ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಸೆವರಾದ ಇವರು 32ವರ್ಷ ಸೇವೆಯನ್ನು ಕಾರವಾರ ಭಟ್ಕಳ ಹೊನ್ನಾವರ ಮತ್ತು ಮಂಗಳೂರಿನಲ್ಲಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಪ್ರಸ್ತುತ ಮಂಗಳೂರಿನ ಕದ್ರಿ ಅಗ್ನಿ ಶಾಮಕ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಪ್ರಶಸ್ತಿಗೆ ಭಾಜನರಾದ ಇವರು ಸಮುದಾಯದ ಮತ್ತು ಇಲಾಖೆಯ ಮೆಚ್ಚಗೆಗೆ ಪಾತ್ರರಾಗಿದ್ದಾರೆ






