.suddibindu.in
ಶಿರಸಿ :TSS ಆಡಳಿತ ಮಂಡಳಿ ವಿರುದ್ಧದ ದಾಖಲಾಗಿದ್ದ ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಹಾಲಿ ಇರುವ ಆಡಳಿತ ಮಂಡಳಿಯನ್ನ ಅಧಿಕಾರವನ್ನ ಮೊಟಕುಗಿಳಿಸಿ ನ್ಯಾಯಾಲಯ ಆದೇಶ ಹೊರಡಿಸಿ ವಿಶೇಷ ಆಡಳಿತಾಧಿಕಾರಿಯನ್ನಾಗಿ ಎಂ. ಹೆಚ್. ನಾಯ್ಕ ಅವರನ್ನ ನ್ಯಾಯಾಲಯ ನೇಮಕ ಮಾಡಿ ಆದೇಶಿಸಿದೆ.

ಟಿ.ಎಸ್ ಎಸ್ ಚುನಾಣೆಯಲ್ಲಿ ಚುನಾವಣಾಧಿಕಾರಿಗೆ ಆಮೀಷ ಒಡ್ಡಿ, ಅಧಿಕಾರ ದುರುಪಯೋಗ ಮಾಡಿ ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ್ದರು ಎನ್ನುವ ಆರೋಪದ ಮೇಲೆ ನ್ಯಾಯಾಲಯದಲ್ಲಿ ಕೆಲ ಸದಸ್ಯರು ಪ್ರಕರಣ ದಾಖಲಿಸಿದ್ದರು‌. ಈ ಬಗ್ಗೆ ಶುಕ್ರವಾರ ತೀರ್ಪು ನೀಡಿದ ನ್ಯಾಯಾಲಯ ವಿಶೇಷ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಮಾಡಿದೆ.

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.ಶಿರಸಿ (TSS) ಸಹಕಾರ ಸಂಘದ 2023-24 ನೇ ಸಾಲಿನಿಂದ 2027-28 ನೇ ಸಾಲಿನವರೆಗಿನ ಅವಧಿಗೆ ಆಡಳಿತ ಮಂಡಲಿಗೆ ನಿರ್ದೇಶಕರುಗಳ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮತ ಎಣಿಕೆ ನಂತರ ಆಯ್ಕೆಯಾದ ನಿರ್ದೇಶಕರುಗಳ ಪಟ್ಟಿಯನ್ನು ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದರು.

ಸಂಘದ ಆಡಳಿತ ಮಂಡಲಿ ನಿರ್ದೇಶಕರ ಆಯ್ಕೆಯ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷಗಳು ಆಗಿದೆ ಎಂದು ಸಹಕಾರ ಸಂಘದ ಸದಸ್ಯರಾದ ಗಣಪತಿ ಶೇಷಗಿರಿ ರಾಯದ್ ಮತ್ತು ವಿನಾಯಕ ದತ್ತಾತ್ರೇಯ ಭಟ್ ಚುನಾವಣಾ ದಾವಾ ಅರ್ಜಿಗಳನ್ನು ದಾಖಲಿಸಿದ್ದರು. ಅರ್ಜಿಗಳನ್ನು ಇತ್ಯರ್ಥಪಡಿಸಿದ ನ್ಯಾಯಾಲಯದಿಂದ, 20-8- 2023ರಂದು ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಲೋಪಗಳಾಗಿರುವುದನ್ನು ಮನಗಂಡು ರಿಟರ್ನಿಂಗ್ ಅಧಿಕಾರಿಯವರು ಈ ಸಹಕಾರ ಸಂಘದ ಆಡಳಿತ ಮಂಡಲಿಗೆ ಆಯ್ಕೆಯಾಗಿರುವ ಬಗ್ಗೆ ಹೊರಡಿಸಲಾಗಿದ್ದ ಲ ಚುನಾವಣಾ ಫಲಿತಾಂಶವನ್ನು ರದ್ದುಪಡಿಸಲಾಗಿದೆ.

ಆಡಳಿತ ಮಂಡಳಿಯ ರದ್ದತಿಯಿಂದ ಉಂಟಾಗಿರುವ ನ್ಯೂನತೆತ ಕಾರಣ ಆಡಳಿತ ಮಂಡಳಿ ಜಾಗಕ್ಕೆ ವಿಶೇಷಾಧಿಕಾರಿಯನ್ನು ನೇಮಿಸಲು ನ್ಯಾಯಾಲಯದಿಂದ ಸಹಕಾರ ಸಂಘಗಳ ಅಧಿನಿಯಮ 1959 ರ ಅಧಿನಿಯಮ 30(1) ರಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಅದರಂತೆ ಸರ್ಕಾರದ ಸಿಎಂಡಬ್ಲ್ಯು/243/ಸಿಎಲ್‌ಎಂ/9/ದಿನಾಂಕ ಅಧಿಸೂಚನ 04-5-1994 ರಂತೆ ಅಧಿಕಾರವನ್ನು ಪ್ರಯೋಗಿಸಿ, ಸಹಕಾರ ಸಂಘಗಳ ಅಧಿನಿಯಮ 1959 ರ ಸಂಖ್ಯೆ ಅಧಿನಿಯಮ 30(1) ರಡಿಯಲ್ಲಿ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.ಶಿರಸಿ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿಯಾಗಿ ಎಂ. ಹೆಚ್. ನಾಯ್ಕ, ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಶಿರಸಿ ಇವರನ್ನು ವಿಶೇಷಾಧಿಕಾರಿಗಳಾಗಿ 6 ತಿಂಗಳ ಅವಧಿಗೆ ನೇಮಿಸಿ ಆದೇಶಿಸಲಾಗಿದೆ.

ವಿಶೇಷಾಧಿಕಾರಿಯವರು ಸಹಕಾರ ಸಂಘಗಳ ಅಧಿನಿಯಮ 1960ರ ಪ್ರಕರಣ 31(4) ರಂತೆ ಈ ಕಛೇರಿಯ ನಿಯಂತ್ರಣಕ್ಕೆ ಒಳಪಟ್ಟು, ಸಹಕಾರ ಸಂಘದ ಆಡಳಿತ ಮಂಡಲಿಯ ಅಥವಾ ಸಹಕಾರ ಸಂಘದ ಯಾರೇ ಪದಾಧಿಕಾರಿಯ ಎಲ್ಲ ಅಧಿಕಾರಿಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು ಮತ್ತು ಸಹಕಾರ ಸಂಘದ ಹಿತದೃಷ್ಟಿಯಿಂದ ಅಗತ್ಯವಾಗಬಹುದಾದಂಥ ಎಲ್ಲ ಕ್ರಮಗಳನ್ನು ಕೈಗೊಳ್ಳತಕ್ಕದ್ದು., ಸಹಕಾರ ಸಂಘಗಳ ಅಧಿನಿಯಮ 1960ರ ಪ್ರಕರಣ 31(5) ರಂತ ವಿಶೇಷಾಧಿಕಾರಿಯು ತನ್ನ ಅಧಿಕಾರಾವಧಿಯು ಮುಕ್ತಾಯವಾಗುವುದಕ್ಕೆ ಮಂಚೆ ಸಂಘದ ಹೊಸ ಆಡಳಿತ ಮಂಡಲಿಯ ರಚನೆಗೆ (ಅಧಿನಿಯಮ, ನಿಯಮಗಳು ಮತ್ತು ಅದರ ಉಪವಿಧಿಗಳಿಗೆ ಅನುಸಾರವಾಗಿ) ವ್ಯವಸ್ಥೆ ಮಾಡಬೇಕೆಂದು ಆದೇಶಿಸಲಾಗಿದೆ..