suddibindu.in
ಶಿರಸಿ: ನಗರದ ಕುಮಟಾ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಕಛೇರಿಯ ಹಾಗೂ ಕರಿಗುಂಡಿ ರಸ್ತೆಯಲ್ಲಿರುವ ಕ್ವಾಲಿಟಿ ವೈನ್ಸ್ ನ ಬೀಗ ಮುರಿದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
ಆರೋಪಿತರಾದ ಮೊಹ್ಮದ್ ರೈಯಾಕ್ ಭಟ್ಕಳ, ಮೊಹ್ಮದ್ ತಬ್ಲಿಷ್ ಭಟ್ಕಳ, ಅಬ್ರಾರ್ ಶೇಖ್, ಭಟ್ಕಳ ಇವರನ್ನು ವಶಕ್ಕೆ ಪಡೆದು ಆರೋಪಿತರಿಂದ 2000, ರೂ ನಗದು ಹಣ ,ಕೃತ್ಯಕ್ಕೆ ಬಳಸಲಾದ ಸ್ವಿಪ್ಟ್ ಕಾರ್ ಅಂದಾಜು ಮೌಲ್ಯ- 5ಲಕ್ಷ ರೂ ಹಾಗೂ ಗ್ಯಾಸ್ ಕಟರ್,ಡ್ರಿಲ್ಲಿಂಗ್ ಮಶೀನ್,ರಾಡ್,ಸ್ಕೂ ಡ್ರೈವರ್ ,ಮಾಸ್ಕ,ಹ್ಯಾಂಡ್ ಗ್ಲೌಸ್,ಕ್ಯಾಪ್ ಜಪ್ತು ಮಾಡಲಾಗಿದೆ.
ಕ್ಯಾಷ್ ಕೌಂಟರಗಳಲ್ಲಿ ಇಟ್ಟಿದ್ದ ಒಟ್ಟು 1,58,000 ನಗದು ಕಳ್ಳತನ ಮಾಡಿಕೊಂಡು ಹೊದ ಬಗ್ಗೆ ಶಿರಸಿ ನಗರ ಮತ್ತು ಮಾರುಕಟ್ಟೆ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿತ್ತು ಮಾರುಕಟ್ಟೆ ಠಾಣೆಯ ಒಂದು,ಮಣಿಪಾಲ್ ಠಾಣೆಯ ಒಂದು ಸೇರಿ ಒಟ್ಟು 3 ಕಳ್ಳತನ ಪ್ರಕರಣಗಳು ಪತ್ತೆಯಾಗಿದೆ, ಆರೋಪಿತರು ಕುಖ್ಯಾತ ಕಳ್ಳರಾಗಿದ್ದು ಹಿರಿಯಡ್ಕ, ಉಡುಪಿ,ಮಣಿಪಾಲ್ ಬ್ರಹ್ಮಾವರ, ಭಟ್ಕಳ ಮುಂತಾದ ಕಡೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣದಲ್ಲಿ ವಿಷ್ಣುವರ್ಧನ್ ಎನ್ ಪೊಲೀಸ್ ಅಧೀಕ್ಷಕರು ಉ.ಕ, ಸಿ.ಟಿ ಜಯಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ, ಎಂ.ಎಸ್.ಪಾಟೀಲ್ ಡಿಎಸ್ಪಿ ಶಿರಸಿ ಉಪ ವಿಭಾಗ, ಶಶಿಕಾಂತ ವರ್ಮಾ ಸಿಪಿಐ ಶಿರಸಿ ವೃತ್ತರವರ ನೇತೃತ್ವದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ.ಬಿ ,ಪಿಎಸ್ಐ ಜ್ಞಾನಶೇಖರ್,ಮಾರುಕಟ್ಟೆ ಠಾಣೆ ಪಿಎಸ್ಐ ರತ್ನಾ ಕುರಿ ಹಾಗೂ ಸಿಬ್ಬಂದಿಗಳಾದ ಎಎಸ್ಐಗಳಾದ ನೆಲ್ಸನ್ ಮೆಂಥಾರೋ, ಅಶೋಕ ರಾಥೋಡ್, ಹೊನ್ನಪ್ಪ ಅಗೇರ, ಪ್ರಶಾಂತ ಪವಾಸ್ಕರ್, ಹನುಮಂತ ಕಬಾಡಿ, ಮಹಾಂತೇಶ ಬಾರಿಕೇರ,ಮಧುಕರ ಗಾಂವಕರ್,ಸದ್ದಾಂ ಹುಸೇನ್,ಮಂಜುನಾಥ ಕಾಶಿಕೋವಿ,ಹನುಮಂತ ಮಾಕಾಪುರ,ರಾಮಯ್ಯ ಪೂಜಾರಿ,ಹನುಮಂತ ಮಾಕಾಪುರ,ಪ್ರವಿಣ್,ಎನ್, ಮತ್ತು ತಾಂತ್ರಿಕ ತಜ್ಞ ಸಿಬ್ಬಂದಿಯ ವರನ್ನೊಳಗೊಂಡ ತಂಡ ಕ್ಷಿಪ್ರವಾಗಿ ಕಾರ್ಯ ಪ್ರವೃತ್ತಗೊಂಡು ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ನಗರ ಠಾಣೆ ಪೊಲೀಸರ ಕಾರ್ಯಕ್ಕೆ ಉ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ





