suddibindu.in
ಹುಬ್ಬಳ್ಳಿ: ಯುವತಿ ಪ್ರೀತಿ ಮಾಡಲು ನಿರಾಕರಣೆ ಮಾಡಿದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ವೀರಾಪುರ ಓಣಿಯ ಕರಿಯಮ್ಮದೇವಸ್ಥಾನ ಬಳಿ ಇಂದು ಬೆಳಗಿನ ಜಾವ ನಡೆದಿದೆ.
- ಶಿರಸಿ ಆಸ್ಪತ್ರೆ ಮೇಲ್ದರ್ಜೆಗೆ ಸಚಿವ ಖಾದರ್ಗೆ ಶಾಸಕ ಭೀಮಣ್ಣ ನಾಯ್ಕ ಮನವಿ
- ಅಡ್ಡಮತದಾನ ಹಿಂದೆ ಬ್ಲ್ಯಾಕ್ಮೇಲ್?; ಬಿಜೆಪಿ ಶಾಸಕ ದಿನಕರ ಶೆಟ್ಟಿ ಸ್ಫೋಟಕ ಆರೋಪ
- ಭಟ್ಕಳದ ಇಸ್ಮಾಯಿಲ್ ಹವ್ವಾಗೆ 6 ತಿಂಗಳು ಗಡಿಪಾರು;
ಅಂಜಲಿ (20) ಕೊಲೆಯಾದ ಯುವತಿ ಆಗಿದ್ದು, 24ವರ್ಷದ ಗೀರೀಶ ಸಾವಂತ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೇಲ ದಿನಗಳಿಂದ ಪ್ರೀತಿಸಲು ಹುಡುಗಿಯ ಹಿಂದೆ ಈ ಯುವಕ ಬಿದ್ದಿದ್ದಾ ಎನ್ನಲಾಗಿದೆ.ಅದಕ್ಕೆ ಯುವತಿ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.
ಈ ಕಾರಣಕ್ಕೆ ಆತ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೊಲೆ ಆರೋಪಿ ಪರಾರಿಯಾಗಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




