suddibindu.in
ಹುಬ್ಬಳ್ಳಿ: ಯುವತಿ ಪ್ರೀತಿ ಮಾಡಲು ನಿರಾಕರಣೆ ಮಾಡಿದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ವೀರಾಪುರ ಓಣಿಯ ಕರಿಯಮ್ಮದೇವಸ್ಥಾನ ಬಳಿ ಇಂದು ಬೆಳಗಿನ ಜಾವ ನಡೆದಿದೆ.
- ಮಿರ್ಜಾನ ಬಳಿ ಬೈಕ್- ರೀಕ್ಷಾ ನಡುವೆ ಅಪಘಾತ ಬೈಕ್ ಸವಾರರಿಬ್ಬರಿಗೆ ಗಾಯ
- ಎಸ್ಎಸ್ಸಿಯಿಂದ ಬಂಪರ್ ನೇಮಕಾತಿ: 6,155 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮದ್ಯ ಮಾರಾಟ ನಿಷೇಧ
ಅಂಜಲಿ (20) ಕೊಲೆಯಾದ ಯುವತಿ ಆಗಿದ್ದು, 24ವರ್ಷದ ಗೀರೀಶ ಸಾವಂತ ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೇಲ ದಿನಗಳಿಂದ ಪ್ರೀತಿಸಲು ಹುಡುಗಿಯ ಹಿಂದೆ ಈ ಯುವಕ ಬಿದ್ದಿದ್ದಾ ಎನ್ನಲಾಗಿದೆ.ಅದಕ್ಕೆ ಯುವತಿ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.
ಈ ಕಾರಣಕ್ಕೆ ಆತ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಕೊಲೆ ಆರೋಪಿ ಪರಾರಿಯಾಗಿದ್ದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




