suddibindu.in
ಕುಮಟಾ : ಉತ್ತರಕನ್ನಡ(uttara Kannada) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳ ಜೊತೆ ಮೆರೆವಣಿಗೆ ನಡೆಸಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
- ಕರಾವಳಿ ಉತ್ಸವ : ಐತಿಹಾಸಿಕ ಸ್ಥಳ, ಅಲ್ಲಿಗೆ ಭೇಟಿ ನೀಡಿದ ಗಣ್ಯ ವ್ಯಕ್ತಿಗಳ ಛಾಯಾಚಿತ್ರ ಪ್ರದರ್ಶನ
- ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
- Indian-Navy/ನೌಕಾನೆಲೆ ವಜ್ರಕೋಶದಲ್ಲಿ ರಹಷ್ಯ ಸ್ಪೋಟ ವಿಚಾರ : ನೌಕಾಪಡೆ ಸ್ಪಷ್ಟನೆ
ಈ ವೇಳೆ ಕುಮಟಾ(kumta) ಕ್ಷೇತ್ರದ ಮಿರ್ಜಾನ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ ಸಹ ತಮ್ಮ ಕ್ಷೇತ್ರದಿಂದ ನೂರಾರು ಕಾರ್ಯಕರ್ತರನ್ನ ಡಾ. ಅಂಜಲಿ ನಿಂಬಾಳ್ಕರ್ ಅವರ ನಾಮಪತ್ರ ಸಲ್ಲಿಕೆಗೆ ಕರೆದೊಯ್ಯುವ ಮೂಲಕ ಕ್ಷೇತ್ರದಲ್ಲ ಕಾಂಗ್ರೆಸ್ ಸಂಘಟನೆ ಗಟ್ಟಿಯಾಗಿದೆ ಎನ್ನುವುದನ್ನ ತೋರಿಸಿದ್ದಾರೆ.

ಮಿರ್ಜಾನ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗೋಕರ್ಣ,(Gokarna) ಮಿರ್ಜಾನ, ಕೋಡ್ಕಣಿ, ಬರ್ಗಿ, ಹಿರೇಗುತ್ತಿ. ತೋರ್ಕೆ, ಗಂಗಾವಳಿ, ಈ ಎಲ್ಲಾ ಭಾಗದಿಂದಲ್ಲೂ ತಮ್ಮ ಹಾಗೂ ಕಾಂಗ್ರೆಸ್ನ ಸಾವಿರಾರು ಕಾರ್ಯಕರ್ತರನ್ನ ಸೇರಿಸಿ ಡಾ. ಅಂಜಲಿ ನಿಂಬಾಳ್ಕರ್ ಅವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ.





