Scuba Diving in Netrani, Murudeshwar,
suddibindu.in
Bhatkala:ಭಟ್ಕಳ :ಉತ್ತರಕನ್ನಡ(uttarkannada) ಜಿಲ್ಲೆಯ ಮುರುಡೇಶ್ವರದ ನೇತ್ರಾಣಿಯಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಒಂದೇರಡು ಕಂಪನಿಗೆ ಜಿಲ್ಲಾಡಳಿತ ಟೆಂಡರ್ ಮುಗಿದಿರುವ ನೆಪವೊಡ್ಡಿ ಸ್ಕೂಬಾ ಡೈವಿಂಗ್( Scuba Diving)ತಡೆಹಿಡಿದಿತ್ತು.ಈ ಬಗ್ಗೆ ಆ ಒಂದು ಕಂಪನಿ ನ್ಯಾಯಾಲಯದ ಮೊರೆಹೋಗಿದ್ದು,ಇದೀಗ ಮುಂದಿನ ಟೆಂಡರ್ ಕರೆದು ಕಾರ್ಯಾದೇಶ ನೀಡುವವರೆಗೆ ಯಾರೂ ಕೂಡ ಸ್ಕೂಬಾ ಡೈವಿಂಗ್ ಮಾಡದಂತೆ ನ್ಯಾಯಾಲಯ (Nethrani) ತಡೆಯಾಜ್ಞೆಯನ್ನು ನೀಡಿದೆ.
ಈ ಹಿಂದೆ ಒಂದೇ ಕಂಪನಿಗೆ ನೆರವಾಗುವಂತೆ ಟೆಂಡರ್ ಕರೆದು,ಉಳಿದ ಕಂಪನಿಗಳನ್ನು ಯಾಮಾರಿಸಲಾಗಿತ್ತು. ಇತ್ತಿಚಿಗೆ ಮತ್ತೊಂದು ಟೆಂಡರ್ ಕರೆದಾಗ ಈ ಮೊದಲು ನೆರವು ಪಡೆದುಕೊಂಡಿದ್ದ ವ್ಯಕ್ತಿ ಬಿಡ್ಡಿಂಗ್ ಮಾಡದೇ ತಾಂತ್ರಿಕ ದೋಷದ ನೆವವೊಡ್ಡಿ ಟೆಂಡರ್ ಪ್ರಕ್ರೀಯೆಗೆ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದ.ಇದನ್ನು ಪರಿಶೀಲಿಸಿದ ಘನ ನ್ಯಾಯಾಲಯ ಎಲ್ಲಾ ಸ್ಕೂಬಾ ಡೈವಿಂಗ್ ಚಟುವಟಿಕೆಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ:-
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ಅಲ್ಲದೇ ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಹಾಗೇ ಮುಂದಿನ ಟೆಂಡರ್(Tender) ಪ್ರಕ್ರಿಯೇಯನ್ನು ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದೆ.ಆದರೆ ಇದುವರೆ ಸುಗಮವಾಗಿ ನಡೆದುಕೊಂಡು ಬರುತ್ತಿದ್ದ ಸ್ಕೂಬಾ ಡೈವಿಂಗ್ಗೆ ಜಿಲ್ಲಾಡಳಿತ ತರಾತೂರಿಯಲ್ಲಿ ಅಂದು ತೆಗೆದುಕೊಂಡ ತೀರ್ಮಾನದಿಂದಾಗಿ ಇಂದು ಜಿಲ್ಲೆಗೆ ಬರುವ ಅದೆಷ್ಟೋ ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಲಾಗದೆ ಮುಂದಿನ ಆದೇಶ ಬರುವವರಗೆ ಕಾಯಬೇಕಾಗಿದೆ….