Fisheries Minister jumped into the sea.
suddibindu.in
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬೆಳಕೆ ಸಮೀಪ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಸಾಲು ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಮುದ್ರಕ್ಕೆ ಜಿಗಿದು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಈಜಿದರು.
ಬೋಟ್ ನಲ್ಲಿ ತೆರಳಿದ್ದ ಸಚಿವರು ಕೃತಕ ಬಂಡೆಸಾಲು ಸಮುದ್ರಕ್ಕೆ ಬಿಡುವ ಕಾರ್ಯಕ್ಕೆ ಚಾಲನೆ ನೀಡಿದರು ಬಳಿಕ ದಡದಿಂದ ಸುಮಾರು ಐದು ನಾಟಿಕಲ್ ದೂರ ತೆರಳಿದ್ದರು ಈ ವೇಳೆ ಸಮುದ್ರಕ್ಕೆ ಜಿಗಿದಿದ್ದಾರೆ..ಸಮುದ್ರಕ್ಕೆ ಜಿಗಿದ ಸಚಿವರು ಕೆಲ ನಿಮಿಷ ಈಜಾಡುವ ಮೂಲಕ ಗಮನ ಸೆಳೆದಿದ್ದಾರೆ.