suddibindu.in
SIRSI: ಶಿರಸಿ : ಯಾವುದೇ ಊರಲ್ಲಿ ಒಂದು ಜಾತ್ರೆ, ದೇವರ ಪೂಜೆ ಇದೆ ಅಂದರೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ಶಿರಸಿ ತಾಲೂಕಿನ ಬನವಾಸಿಯಲ್ಲಿ (Banavasi)ವರ್ಷಕ್ಕೊಮ್ಮೆ ನಡೆಯುವ ಹನುಮಂತ ದೇವರ ಜಾತ್ರೆಯಲ್ಲಿ ಬಿಂದಾಸ್ ಆಗಿ ಗುಡುಗುಡಿ(Gambling game) ಆಟಕ್ಕೆ ಅವಕಾಶ‌ ಇದೆ ಎಂದು ಗೊತ್ತಾಗಿದ್ದೆ ತಡ ಗುಡುಗುಡಿ ಪ್ರಿಯರಲ್ಲೇ ಕಾಲಕ್ಕಿತ್ತು ಓಡೋಡಿ ಬಂದಿದ್ದಾರೆ‌.‌ ಗುಡುಗುಡಿ ಆಟದ ವಿಡಿಯೊ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನ ಪುರ್ತಿ ಓದಿ:-ಮಣಕಿ ಮೈದಾನದಲ್ಲಿ ಸಂಜೀವಿ ಪರ್ವತ ಕೇಳಗಿಳಿಸಿದ ಆಂಜನೇಯ.!

ಉತ್ತರ ಕನ್ನಡ(uttara Kannada) ಜಿಲ್ಲೆಯಲ್ಲಿ ಬನವಾಸಿ ಸಮೀಪ ಇರುವ ಅಂಡಗಿ ಹನುಮಂತ (Anjaneya)ದೇವರ ಜಾತ್ರೆ ಸಂದರ್ಭದಲ್ಲಿ ಪೊಲೀಸರ ಸರ್ಪಗಾವಲಿಲ್ಲೆ ಅಕ್ರಮ ಜುಗರಿ ಆಟ ನಡೆಸಲಾಗಿದೆ ಎಂದು ಸಾರ್ವಜನಿಕರು ಮಾಡುತ್ತಿರುವ ಆರೋಪಕ್ಕೆ ವಿಡಿಯೋ ಸಾಕ್ಷಿಯಾಗಿದೆ.ದಾಸನಕೊಪ್ಪ, ಮಳಗಿ,ಆನವಟ್ಟಿ ಸೇರಿದಂತೆ ನಾನಾ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಜೂಜಾಟದಲ್ಲಿ ತೋಡಗಿ ಕೊಂಡಿದ್ದಾರೆ.ಜೂಜಾಟಕ್ಕೆ ಅವಕಾಶ ಕೊಟ್ಟ ಬನವಾಸಿ ಪಿಎಸ್ಐ ವಿರುದ್ಣ ಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದು ಕೇವಲ ಹನುಮಂತ ದೇವರ ಜಾತ್ರೆಗೆ ಮಾತ್ರ ಸೀಮಿತವಾದಗಿರುವ ಚೌಕಡ,ಇಸ್ಪಿಟ್,ಆಟಿಣ್ ಆಟವಲ್ಲವಂತೆ ಬನವಾಸಿ ಸುತ್ತಮುತ್ತಲ್ಲಿನಲ್ಲಿ ಯಾವುದೇ ಮಾಸ್ತಿ,ಜಟಕ,ನಾಗರ ಕಟ್ಟೆ ಪೂಜೆಗಳಿದ್ದರೂ ಪೊಲೀಸರ ಯಾವುದೇ ಭಯವಿಲ್ಲದೆ ಬಿಂದಾಸ್ ಆಗಿ ಬನವಾಸಿ ಭಾಗದಲ್ಲಿ ಕಳೆದ ಕೆಲ‌ವರ್ಷದಿಂದ ನಡೆಯುತ್ತಿವೆ ಎಂದು ಸ್ಥಳಿಯರು ಆರೋಪಿಸಿದ್ದು, ಈ ಬಗ್ಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಮಾಡಬೇಕಿದೆ.

ಅನುಮತಿ ಪಡಕೊಂಡಿದ್ದು ನಾವೇ.ಅಧ್ಯಕ್ಷರ ಆಡಿಯೋ ವೈರಲ್, ಹನುಮಂತ ದೇವರ ಜಾತ್ರೆಯಲ್ಲಿ ಜೂಗಾರಿ ಆಟಕ್ಕೆ ನಾನೇ ಹೇಳಿ ಅನುಮತಿ ಪಡೆದುಕೊಂಡಿದ್ದೆ. ಆದರೆ ಅದನ್ನ ಯಾರೋ ವಿಡಿಯೋ ಮಾಡಬಿಟ್ಟಿದ್ದಾರೆ. ಅದು ಅಲ್ಲದೆ ಸೋಶಿಯಲ್ ಮಿಡಿಯಾದಲ್ಲಿ ಸುದ್ದಿ ಸಹ ಬಂದ ಬಿಟ್ಟಿದೆ. ಹೇಗಾದ್ರೂ ಮಾಡಿ ಆ ಸುದ್ದಿ ಡಿಲೀಟ್ ಮಾಡರ್ರಿ. ನಾನು ನಿಮ್ಮವನೆ ಅಲ್ವಾ.? ಸುದ್ದಿ ಬಂದಿದಕ್ಕೆ ಬಹಳ ಕಿರಿಕಿರಿ ಆಗತ್ತಾ ಇದೆ..ಹೀಗಂತಾ ಸ್ಥಳೀಯ ಹಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರ ಜೊತೆ ಮಾತ್ನಾಡಿರುವ ಆಡಿಯೋ ಸಹ ವೈರಲ್ ಆಗಿದೆ..ಹೀಗಾಗಿ ಈ ಜೂಗಾರಿ ಆಟ ಅಲ್ಲಿನ ಪಿಎಸ್ಐ ಅವರ ಗಮನಕ್ಕೆ ತಂದೆ ಮಾಡಿರುವುದು ಅಧ್ಯಕ್ಷರ ಆಡಿಯೋದಿಂದಲ್ಲೆ ಗೊತ್ತಾಗತ್ತಿದೆ. ಜೂಗಾರಿ ಆಟಕ್ಕೆ ಅವಕಾಶ ಅಧಿಕಾರಿ ವಿರುದ್ದ ಕ್ರಮ‌ಜರುಗಿಸೋದಕ್ಕೆ ಅಧ್ಯಕ್ಷರ ಆಡಿಯೋ ಒಂದೆ ಸಾಕು…