suddibindu.in
Kumta:ಕುಮಟಾ: ಸಂಜೀವಿನಿಯನ್ನ(Sanjeevini mountain) ಹೊತ್ತ ಆಂಜನೇಯ ನೂರಾರೂ ಅಡಿ ಎತ್ತರಿಂದ ರಾತ್ರಿ ಸಮಯದಲ್ಲಿ ಕುಮಟಾ ಮಣಕಿ ಮೈದಾನದಲ್ಲಿ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.ಅಷ್ಟಕ್ಕೂ ಆಂಜನೇಯ(Anjaneya ) ಕುಮಟಾಕ್ಕೆ (kumta) ಯಾಕೆ ಬಂದಿಳಿದ ಎನ್ನುವ ಬಗ್ಗೆ ಈ ಸುದ್ದಿಯನ್ನ ಕೊನೆ ತನಕ ಓದಿ.
ಇದನ್ನೂ ಓದಿ: ಪ್ರಯಾಣಿಕರ ಮೇಲೆ ಟೋಲ್ ಸಿಬ್ಬಂದಿಗಳಿಂದ ಹಲ್ಲೆ
ಹೌದು ಕುಮಟಾ ಜಾತ್ರಾ ಪ್ರಯುಕ್ತವಾಗಿ ಕಲಾಗಂಗೋತ್ರಿ ಕುಮಟಾ ಇವರ ಆಶ್ರಯದಲ್ಲಿ ಕುಮಟಾದ ಮಣಿ ಮೈದಾನದಲ್ಲಿ ಹನುಮ ಸಂಜೀವಿನಿ ಹಾಗೂ ಪವಿತ್ರ ಪದ್ಮನಿ ಯಕ್ಷಗಾನ(Yakshagana)ಆಯೋಜನೆ ಮಾಡಲಾಗಿತ್ತು. ಸಂಜೀವಿ ಎಂಬ ಯಕ್ಷಗಾಜ ಪ್ರಸಂಗದಲ್ಲಿ ಆಂಜನೇಯ ಸಂಜೀವಿನಿ ಪರ್ವತವನ್ನ ಹೊತ್ತು ತರುವ ಸನ್ನಿವೇಶವನ್ನ ಮಾಡಲಾಗಿತ್ತು, 100 ಅಡಿ ಎತ್ತರದಿಂದ ಹನುಮಂತ ಸಂಜೀವಿನಿ ಪರ್ವತ ಹೊತ್ತು ತರುವ ಸನ್ನಿವೇಶ ಪ್ರೇಕ್ಷಕರ ಗಮನ ಸೆಳೆದಿದ್ದಿದ್ದು,ಈ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತ್ತಾ ಇದೆ..
ಈ ಹಿಂದೆ ಸರೋವರದಿಂದ ಕೌರವ ಎದ್ದು ಬರುವ ದ್ರಶ್ಯ, ಸಮುದ್ರ ಮಥನ, ಕಾಕ ವಾಹನನಾಗಿ ಶನೀಶ್ವರ ಬರುವ ದ್ರಶ್ಯ ಸಂಯೋಜನೆ ಮಾಡುವ ಮೂಲಕ ಯಕ್ಷಗಾನದಲ್ಲಿ ಹೊಸತನ ನೀಡುತ್ತಾ ಬಂದಿರುವ ಕಲಾಗಂಗೋತ್ರಿ ಸಂಸ್ಥೆ ಈ ಬಾರಿ ಮತ್ತೊಂದು ಪರಿಕಲ್ಪನೆ ಮಾಡುವ ಮೂಲಕ ಪ್ರೇಕ್ಷರಕ ಮೆಚ್ಚುಗೆ ಪಡೆದುಕೊಂಡಿದೆ..