ಸುದ್ದಿಬಿಂದು ಬ್ಯೂರೋ
ಹಳಿಯಾಳ: ಪಟ್ಟಣದಲ್ಲಿ ಮಾಟ ಮಂತ್ರ ವಾಮಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ವಾಮಾಚಾರ ಮಾಡಿದ ನಿಂಬೆಹಣ್ಣನ್ನ ಅಂಗಡಿ ಒಂದರ ಎದುರು ಎಸೆದು ಹೋಗಿದ್ದು,ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿ ಬಣ್ಣದ ಆ್ಯಕ್ಟಿವಾದಲ್ಲಿ ಬಂದ ದಂಪತಿಗಳು ಪಟ್ಟಣದ ಅಂಗಡಿ ಒಂದರ ಎದುರು ಕೆಂಪುಬಣ್ಣ ದಾರ ಹಾಗೂ ಕಬ್ಬಿಣ ಮೊಳೆಯನ್ನ ಹಾಕಿರುವ ನಿಂಬೆ ಹಣ್ಣೊಂನ್ನ ರಸ್ತೆ ಮೇಲೆ ಎಸೆದು ಹೋಗಿದ್ದಾರೆ. ಲಿಂಬು ಎಸೆದಿರುವ ವಿಡಿಯೋ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮಾಟ ಮಂತ್ರ ಮಾಡಿ ಲಿಂಬು ಎಸೆದು ಹೋಗಿರುವ ಬಗ್ಗೆ ಸಿ ಸಿ ಕ್ಯಾಮರಾದ ವಿಡಿಯೋ ಆಧರಿಸಿ ಬಸವರಾಜ ಎಂಬುವವರು ಇದೀಗ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆ ವಿಡಿಯೋದಲ್ಲಿ ಕಂಡು ಬಂದಿರುವ ವ್ಯಕ್ತಿ ಯಾರು ಎನ್ನುವುದನ್ನ ಪತ್ತೆ ಹಚ್ಚಬೇಕಿದೆ.
ಈ ದಂಪತಿಗಳು ಇದೇ ರೀತಿ ಹಲವೆಡೆ ಇದೆ ರೀತಿ ಮಾಡಿರುವ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ..ಇವರು ಪಟ್ಟಣದ ಮಾರುಕಟ್ಟೆ ರಸ್ತೆಯ ಬಟ್ಟೆ ವ್ಯಾಪಾರಸ್ಥರು ಎನ್ನಲಾಗುತ್ತಿದೆ.