ಸುದ್ದಿಬಿಂದು ಬ್ಯೂರೋ
ಕುಮಟಾ :ಇಲ್ಲಿನ ವಕೀಲರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗಾಗಿ ನಿನ್ನೆ ನಡೆದ ಚುನಾವಣೆಯಲ್ಲಿ ನ್ಯಾಯವಾಧಿ ಆರ್ ಜಿ ನಾಯ್ಕ ಅವರು ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಎಂ ಎಸ್ ಭಟ್ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನ್ಯಾಯವಾಧಿ ಆರ್ ಜಿ ನಾಯ್ಕ ಹಾಗೂ ವಿವೇಕ ಭಂಡಾರಿವ ಅವರು ಸ್ಪರ್ಧೆ ಮಾಡಿದ್ದರು. ಆರ್ ಜಿ ನಾಯ್ಕಅವರು ವಿವೇಕ ಭಂಡಾರಿ ಅವರ ವಿರುದ್ದ 11ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧೆ ಮಾಡಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್ ಜಿ ನಾಯ್ಕ ಅವರು ಹರಿದ್ವಾರ ಪ್ರವಾಸದಲ್ಲಿ ಒಂದುವಾರದಿಂದ ಕಾರಣದಿಂದಾಗಿ ಚುನಾವಣೆಯಲ್ಲಿ ಅವರಿಗೂ ಸಹ ಮತದಾನ ಮಾಡಲು ಸಾಧ್ಯವಾಗಿಲ್ಲಿ .ಆರ್ ಜಿ ನಾಯ್ಕ ಹರಿದ್ವಾರದಲ್ಲೇ ಇದ್ದುಕೊಂಡು ಗೆದ್ದಿರುವುದು ಇಲ್ಲಿ ವಿಶೇಷ