.ಸುದ್ದಿಬಿಂದು ಬ್ಯೂರೋ
ಕಾರವಾರ : ಜಿಲ್ಲೆಯಲ್ಲಿ ಪಿಆರ್ ಇಡಿ (ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗ) ಇಲಾಖೆಯ ಅಡಿಯಲ್ಲಿ ಟೆಂಡರ್ ಮೂಲಕ ಕಾಮಗಾರಿ ಪಡೆದು ಕಾಮಗಾರಿ ಮೂಗಿದು ವರ್ಷ ಕಳೆದರು. ಈ ಹಿಂದಿನ ಗುತ್ತಿಗೆದಾರರಿಗೆ ಕಾಮಗಾರಿ ಹಣ ಮಂಜೂರಿ ಮಾಡದೆ.ಹೊಸದಾಗಿ ಕಾಮಗಾರಿ ಮಾಡಿರುವ ಅದರಲ್ಲಿಯೂ ಓರ್ವ ಗುತ್ತಿಗೆದಾರರನಿಗೆ ಮಾತ್ರ ಇಲಾಖೆಯ ಹಿರಿಯ ಅಧಿಕಾರಿ ಬಿಲ್ ಪಾಸ್ ಮಾಡಿರುವುದಾಗಿ ಗುತ್ತಿಗೆದಾರ ತುಕರಾಮ ನಾಯ್ಕ ಅರೋಪಿಸಿದ್ದಾರೆ.
ಜಿಲ್ಲಾಪಂಚಾಯತ ಇಂಜಿನಿಯರಿಂಗ್ ವಿಭಾಗದ ಇಇ ಆಗಿರುವ ಗೋವಿಂದ ಚಪ್ಪರ ಎಂಬುವವರು ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಾವು ಕಳೆದ ಎರಡು ಮೂರು ವರ್ಷದ ಹಿಂದೆ ಟೆಂಡರ್ ಮೂಲಕ ಕಾಮಗಾರಿಯನ್ನ ಪಡೆದು ಎಲ್ಲಾ ಕಾಮಗಾರಿಯನ್ನ ಪೂರ್ಣಗೊಳಿಸಿದ್ದೇವೆ. ಆದರೆ ನಮ್ಮಗೆ ಯಾವುದೇ ಬಿಲ್ ನೀಡದೆ ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ಓರ್ವ ಗುತ್ತಿಗೆದಾರನಿಗೆ ಮಾತ್ರ ಎರಡರಿಂದ ಮೂರು ಕೋಟಿ ಬಿಲ್ ಪಾಸ್ ಮಾಡಿದ್ದಾರೆ.ಇನ್ನೂ ಎರಡು ಕೋಟಿಗೂ ಹೆಚ್ಚಿನ ಹಣವನ್ನ ಆ ಗುತ್ತಿಗೆದಾರನ ಮುಂದಿನ ಕಾಮಗಾರಿಗೆ ನೀಡುವುದಕ್ಕಾಗಿ ಕಾಯ್ದಿರಿಸಿಕೊಂಡಿದ್ದಾರೆಂದು ಗುತ್ತಿಗೆದಾರ ತುಕರಾಮ ನಾಯ್ಕ ಜಿಲ್ಲಾ ಪಂಚಾಯತ ಇಇ ಗೋವಿಂದ ಚಪ್ಪರ ವಿರುದ್ಧ ದೂರಿದ್ದಾರೆ.
ಇನ್ನೂ ಈ ಬಗ್ಗೆ ನಾನು ಸಾಕಷ್ಟು ಭಾರಿ ಇಇ ಗೋವಿಂದ ಚಪ್ಪರ ಬಳಿ ಕೇಳಿನೆ ಅದಕ್ಕೆ ಅವರು ಆ ಗುತ್ತಿಗೆದಾರನೆ ಎಲ್ಲಾ ಹಣವನ್ನ ಮಂಜೂರಿ ಮಾಡಿಸಿಕೊಂಡು ಬಂದಿರುವುದಾಗಿ ಹೇಳುತ್ತಿದ್ದಾರೆ. ಆದರೆ ಯಾವುದೇ ಕಾಮಗಾರಿಯ ಹಣ ಸರಕಾರದಿಂದ ಬಿಡುಗಡೆ ಮಾಡಿಸಿಕೊಂಡು ಬರಬೇಕಾದರೂ ಇಲ್ಲಿನ ಅಧಿಕಾರಿಯಿಂದ ಕಾಮಗರಿ ಪೂರ್ಣಗೊಂಡಿದೆ ಎನ್ನುವ ಬಗ್ಗೆ ಅಧಿಕೃತ ಅನುಮತಿ ಪತ್ರಬೇಕು.ಹೀಗಿರುವಾಗ ಉಳಿದ ಗುತ್ತಿಗೆದಾರಿಗೆ ಗೋವಿಂದ ಚಪ್ಪರ ದಾರಿ ತಪ್ಪಿಸುವ ಮಾತನಾಡುತ್ತಾರೆ.
ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನ
ಇವರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳಿದೆ. ಅತೀ ಶೀಘ್ರದಲ್ಲಿ ಗೋವಿಂದ ಚಪ್ಪರ್ ವಿರುದ್ದ ಲೋಕಾಯುಕ್ತಕ್ಕೆ ದೂರು ದಾಖಲಿಸುವುದಾಗಿ ತುಕರಾಮ ನಾಯ್ಕ ತಿಳಿಸಿದ್ದಾರೆ, ಅಷ್ಟೆ ಅಲ್ಲದೆ ಆ ಎಲ್ಲಾ ದಾಖಲೆಗಳನ್ನ ನಮ್ಮಗೂ ಸಹ ಪೊರೈಸಿದ್ದಾರೆ. ಇವರ ಎಲ್ಲಾ ದಾಖಲೆಗಳೊಂದಿಗೆ ಮುಂದಿನ ದಿನದಲ್ಲಿ ಇವರ ಇನ್ನಷ್ಟು ಅವ್ಯವಹಾರವನ್ನ ಬಯಲಿಗೆ ಎಳೆಯಲಾಗುವುದು. ಈ ಬಗ್ಗೆ ತುಕರಾಮ ನಾಯ್ಕ ಒಬ್ಬರೆ ಅಲ್ಲದೇ ಇನ್ನೂ ಅನೇಕ ಗುತ್ತಿಗೆದಾರರು ಗೋವಿಂದ ಚಪ್ಪರ ವಿರುದ್ದ ನಮ್ಮ ಬಳಿ ದೂರು ಹೇಳಿಕೊಂಡಿದ್ದಾರೆ.