ಸುದ್ದಿಬಿಂದು ನ್ಯೂಸ್ ಡೆಸ್ಕ್
ಬೆಂಗಳೂರು: ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ ಎಂ ಇಬ್ರಾಹಿಂ(CM Ibrahim) ಇಂದು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ (LokSabha elections)ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿಯಿಂದಾಗಿ ಮುನಿಸಿಕೊಂಡಿರುವ ಇಬ್ರಾಹಿಂ, ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಪ್ತ ಮೂಲಗಳು ತಿಳಿಸಿವೆ.
ಸಿ ಎಮ್ ಇಬ್ರಾಹಿಂ ಬೆಂಗಳೂರಿನಲ್ಲಿಂದು ಜೆಡಿಎಸ್- ಬಿಜೆಪಿ(jds-bjp)ಮೈತ್ರಿ, ಚಿಂತನ ಮಂಥನ ಸಭೆ ಕರೆದಿದ್ದು, ಎಲ್ಲಾ ವರ್ಗದ ಜನರನ್ನು ಸಭೆಗೆ ಆಹ್ವಾನಿಸಿದ್ದಾರೆ. ಯಾರ ವಿಶ್ವಾಸ ಪಡೆಯದೇ, ಚರ್ಚಿಸದೆ ಏಕಾಏಕಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದರು.
ಅಲ್ಲದೆ, ಖುದ್ದು ದೇವೇಗೌಡರು(HD Deve Gowda)ಕರೆ ಮಾಡಿದ್ದರು ಸಹ ಇಬ್ರಾಹಿಂ, ಯಾರ ಕೈಗೂ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ,(H D Kumaraswamy)ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ನೆಚ್ಚಿನ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು.ಇದು ಇಬ್ರಾಹಿಂರಿಗೆ ಮತ್ತಷ್ಟು ಕೆರಳಿಸಿದೆ ಎನ್ನಲಾಗಿದೆ.
ಯಾವಾಗ ಇಬ್ರಾಹಿಂ,ದಳಪತಿಗಳಿಂದ ಅಂತರ ಕಾಯ್ದುಕೋಂಡರೋ,ಒಬ್ಬೊಬ್ಬರಾಗಿ ಅಲ್ಪಸಂಖ್ಯಾತ ನಾಯಕರು ಪಕ್ಷದ ತ್ಯಜಿಸಲು ಮುಂದಾದರು. ಇಬ್ರಾಹಿಂ ರನ್ನು ನಾವೇನು ಜೆಡಿಎಸ್ ಗೆ ಕರೆದಿರಲಿಲ್ಲ, ಅವರು ತಾವಾಗಿಯೇ ಪಕ್ಷಕ್ಕೆ ಬಂದಿದ್ದು ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.